ರಾಯ್ಪುರ: ಮಾನವ ಕಳ್ಳಸಾಗಾಣೆಗೊಳಗಾಗಿ ಕತ್ತಲೆಯಲ್ಲೇ ಜೀವನ ದೂಡುತ್ತಿದ್ದ ಹಲವು ಯುವತಿಯರಿಗೆ ಬೆಳಕಾಗಿ ದಾರಿ ತೋರಿಸಿದೆ ‘ಬೇಟಿ ಜಿಂದಾಬಾದ್ ಬೇಕರಿ’. ಛತ್ತೀಸ್ಗಢದ ಜಶ್ಪುರ್ ಜಿಲ್ಲೆಯ ಕನ್ಸಾಬೆಲ್ ನಗರಲ್ಲಿರುವ ಈ ಬೇಕರಿಯನ್ನು ಆದರ್ಶಮಯ ಉದ್ಯಮಕ್ಕೆ ಮತ್ತೊಂದು ಉದಾಹರಣೆ ಎಂದರೆ ತಪ್ಪಾಗಲಾರದು.
ಮಾನವ ಕಳ್ಳಸಾಗಾಣೆಯಲ್ಲಿ ಸಂತ್ರಸ್ಥರಾದ ಯುವತಿಯರಿಗೆ ಬೇಕರಿ ಮೂಲಕ ಪುನರ್ವಸತಿಯನ್ನು ಕಲ್ಪಿಸಿಕೊಟ್ಟವರೇ ಜೋಶ್ಪುರ ಕಲೆಕ್ಟರ್ ಪ್ರಿಯಾಂಕ ಶುಕ್ಲಾ. ಈ ಮಹಿಳೆಯರಿಗೆ ಅಡುಗೆಯಲ್ಲಿ ಆಸಕ್ತಿಯಿರುವುದನ್ನು ಗಮನಿಸಿದ ಅವರು, ಬೇಕರಿಯೊಂದನ್ನು ತೆರೆಯಲು ಅವರಿಗೆ ಸಹಾಯ ಮಾಡಿದರು. ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚು ಇರುವುದರಿಂದ ಕೇಕ್, ಕುಕೀಸ್, ಮಫಿನ್ಗಳಿಗೆ ಅಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಅವುಗಳನ್ನು ತಯಾರಿಸುವ ತರಬೇತಿಯನ್ನು ಇವರಿಗೆ ನೀಡಲು ಮುಂದಾದರು.
ಎರಡು ತಿಂಗಳುಗಳ ಕಾಲ ಈ ಮಹಿಳೆಯರು ಪುನೆಯಲ್ಲಿನ ಸರ್ಕಾರಿ ಸ್ವಾಮ್ಯದ ವಿಗ್ಯಾನ್ ಭವನದಲ್ಲಿ ಕುಕ್ಕಿಂಗ್ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಈ ಬೇಕರಿಯಲ್ಲಿ ಅತ್ಯುತ್ತಮ ಖಾದ್ಯಗಳನ್ನು ಇವರು ತಯಾರಿಸುತ್ತಾರೆ. ಇದರಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸುತ್ತಿದ್ದಾರೆ.
2017ರಲ್ಲಿ ಈ ಪ್ರದೇಶದಲ್ಲಿ ಸುಮಾರು 20 ಮಹಿಳೆಯರನ್ನು ಮಾನವ ಕಳ್ಳಸಾಗಾಣೆಯಿಂದ ರಕ್ಷಣೆ ಮಾಡಲಾಗಿತ್ತು. ಅವರಲ್ಲಿ ಕೆಲವರು ಮನೆಗೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಹಲವರು ಬೇಕರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿನಕ್ಕೆ ರೂ.1500ರವರೆಗೆ ಆದಾಯ ಬರುತ್ತದೆ. ಮದುವೆ, ಹಬ್ಬಗಳ ಸಂದರ್ಭ ಆದಾಯ ದ್ವಿಗುಣಗೊಳ್ಳುತ್ತದೆ. ಒಟ್ಟಿನಲ್ಲಿ ‘ಬೇಟಿ ಜಿಂದಾಬಾದ್ ಬೇಕರಿ’ ಮಹಿಳೆಯರ ಬದುಕನ್ನು ಮತ್ತೆ ಹಳಿಗೆ ಬರುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.