ಸಿಂಗಾಪುರ: ಸಿಂಗಾಪುರ ಭೇಟಿಯ ಮೂರನೇ ದಿನವೂ ಪ್ರಧಾನಿ ನರೇಂದ್ರ ಮೋದಿ ಬ್ಯೂಸಿ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಅಲ್ಲಿನ ಮಾಜಿ ಪ್ರಧಾನಿ ಗೋಹ್ಹ್ ಚೋಕ್ ಟಾಂಗ್ ಅವರನ್ನು ಭೇಟಿಯಾಗುವ ಮೂಲಕ ಅವರು ದಿನವನ್ನು ಆರಂಭಿಸಿದರು.
ಬಳಿಕ ಕ್ಲಿಫೋರ್ಡ್ ಪೀಯರ್ ಪ್ರದೇಶಕ್ಕೆ ತೆರಳಿ ಸಿಂಗಾಪುರದ ನೀರಿನಲ್ಲಿ ಮಹಾತ್ಮ ಗಾಂಧೀಜಿಯವರ ಚಿತಾ ಭಸ್ಮವನ್ನು ವಿಸರ್ಜನೆಗೊಳಿಸಿದ ಸ್ಮರಣಾರ್ಥ ಸ್ಥಾಪಿಸಲಾದ ಫಲಕವನ್ನು ಅನಾವರಣಗೊಳಿಸಿದರು. ಮೂಲಕ ಅವರು ದಿನವನ್ನು ಆರಂಭಿಸಿದ್ದಾರೆ.
1948ರಲ್ಲಿ ಗಾಂಧೀಜಿಯವರ ಚಿತಾ ಭಸ್ಮವನ್ನು ದೇಶದ ಮತ್ತು ವಿದೇಶಗಳ ಹಲವಾರು ಭಾಗಗಳಿಗೆ ಕೊಂಡೊಯ್ದು ಅಲ್ಲಿ ವಿಸರ್ಜನೆ ಮಾಡಲಾಗಿದೆ. ಸಿಂಗಾಪುರವನ್ನೂ ಇದು ಒಳಗೊಂಡಿದೆ. ಫಲಕದ ಅನಾವರಣದ ಬಳಿಕ ಪ್ರಧಾನಿ ಮೋದಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸಿಂಗಾಪುರದ ಭೇಟಿಯಲ್ಲಿದ್ದ ಯುಎಸ್ ರಕ್ಷಣಾ ಸಚಿವರನ್ನು ಭೇಟಿಯಾದರು. ಇಂದು ಅವರು ನ್ಯಾಷನಲ್ ಆರ್ಚಿಡ್ ಗಾರ್ಡನ್ಗೆ ತೆರಳಲಿದ್ದಾರೆ. ಬಳಿಕ ಚುಲಿಯಾ ಮಸೀದಿಗೆ ಭೇಟಿಕೊಡಲಿದ್ದಾರೆ. ಶ್ರೀ ಮಾರಮ್ಮನ್ ದೇಗುಲ, ಬುದ್ಧ ರಿಲಿಕ ಟೆಂಪಲ್ಗೂ ಭೇಟಿಕೊಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.