ಮಂಗಳೂರು: ಭಾರೀ ಮಳೆಯಿಂದಾಗಿ ತತ್ತರಿಸಿರುವ ಮಂಗಳೂರು ಉತ್ತರ ಕ್ಷೇತ್ರದ ಹಲವಾರು ಪ್ರದೇಶಗಳಿಗೆ ಕಳೆದೆರಡು ದಿನಗಳಿಂದ ನಿರಂತರವಾಗಿ ಭೇಟಿ ನೀಡುತ್ತಿರುವ ಶಾಸಕ ಡಾ.ಭರತ್ ಶೆಟ್ಟಿ ಸಂತ್ರಸ್ಥರ ಆಳಲನ್ನು ಆಲಿಸಿ ಅವರಿಗೆ ಸ್ಥೈರ್ಯ, ನೆರವು ನೀಡುವ ಕಾರ್ಯವನ್ನು ಅವಿರತವಾಗಿ ಮಾಡುತ್ತಿದ್ದಾರೆ.
ನೀರು ನಿಂತು ಕೆರೆಯಂತಾಗಿದ್ದ ಸುರತ್ಕಲ್ನ ಹೊಸ ಮಾರುಕಟ್ಟೆ ಕಾಮಗಾರಿ ಪ್ರದೇಶ, ಮುಳುಗಡೆಗೊಂಡಿದ್ದ ಅಗರಮೇಲು, ಕೃಷ್ಣಾಪುರ ೭ನೇ ಬ್ಲಾಕ್ ವಸತಿ ಬಡಾವಣೆಗಳಿಗೆ ಭೇಟಿಕೊಟ್ಟ ಅವರು ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ. ಪರಿಹಾರವನ್ನು ಒದಗಿಸಿಕೊಡುವುದಾಗಿ ಸಂತ್ರಸ್ಥರಿಗೆ ಭರವಸೆ ನೀಡಿದ್ದಾರೆ.
ಕಟ್ಟಡ ಕುಸಿತಗೊಂಡ ಶ್ರೀ ನಾರಾಯಣ ಗುರು ಶಾಲೆಗೆ ತೆರಳಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಗಾಯಾಳುಗಳನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ ಮನೆ ಕುಸಿತ ಸೇರಿದಂತೆ ಮಳೆಯಿಂದಾಗಿ ಸಂಭವಿಸಿದ ಇತರ ದುರ್ಘಟನೆಗಳಿಂದ ತೊಂದರೆಗೀಡಾದ ಜನರನ್ನು ಭೇಟಿಯಾಗಿ ಸೂಕ್ತ ಪರಿಹಾರದ ಭರವಸೆಯನ್ನು ಅವರು ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಶಾಸಕರು ಮಳೆಯಿಂದಾಗಿ ತತ್ತರಿಸಿದ ಭಾಗಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ತಮ್ಮ ಕಾರ್ಯಕರ್ತರೊಂದಿಗೆ, ಕಾರ್ಪೋರೇಟರ್ಗಳೊಂದಿಗೆ ಜಡಿ ಮಳೆಯನ್ನೂ ಲೆಕ್ಕಿಸದೆ ಅವರು ಸಂತ್ರಸ್ಥರ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಅವರ ಈ ಕಾರ್ಯವನ್ನು ಗಮನಿಸಿರುವ ಕ್ಷೇತ್ರದ ಜನರಲ್ಲಿ ಉತ್ತಮ ಪ್ರತಿನಿಧಿಯನ್ನೇ ಅಯ್ಕೆ ಮಾಡಿದ್ದೇವೆ ಎಂಬ ಸಂತೃಪ್ತ ಭಾವ ಮೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.