ನವದೆಹಲಿ: ಬಿಜೆಪಿ ವಿರುದ್ಧ ಒಟ್ಟಾಗಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ಮಾಡುವುದಕ್ಕೂ ಒಂದು ಮಿತಿಯಿದೆ ಎಂದಿದ್ದಾರೆ. ಕೇವಲ ಮೋದಿಯನ್ನು ವಿರೋಧಿಸುವುದಕ್ಕಾಗಿ ಅವರು ಭಾರತವನ್ನೇ ವಿರೋಧಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.
‘ಬಡ ದಲಿತರಿಗಾಗಿ, ಹಿಂದುಳಿದ ವರ್ಗಕ್ಕಾಗಿ ಮಾಡಿದ ಕಾರ್ಯದ ಬಗ್ಗೆ ಕಾಂಗ್ರೆಸ್ ಗೇಲಿ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಕ್ಕೆ ತಡೆಯೊಡ್ಡುತ್ತಿದ್ದಾರೆ, ಅಗೌರವದಿಂದ ಕಾಣುತ್ತಿದ್ದಾರೆ. ಮಹಿಳೆಯರಿಗಾಗಿ ಟಾಯ್ಲೆಟ್ ನಿರ್ಮಿಸುವುದು ತಮಾಷೆಯೆಂದು ಅವರು ಭಾವಿಸಿದ್ದಾರೆ, ಸ್ವಚ್ಛ ಭಾರತ, ಎಲ್ಪಿಜಿ ಸಂಪರ್ಕ, ಬ್ಯಾಂಕ್ ಖಾತೆ ತೆರೆಯುವುದು ತಮಾಷೆ ಎಂದು ಭಾವಿಸಿದ್ದಾರೆ. ಕುಟುಂಬ ರಾಜಕಾರಣ ಮಾಡುವವರಿಗೆ ಎಲ್ಲವೂ ತಮಾಷೆಯಾಗಿದೆ, ಮೋದಿಯನ್ನು ವಿರೋಧಿಸುವುದಕ್ಕಾಗಿ ಅವರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುತ್ತಾರೆ, ಭಾರತವನ್ನೇ ವಿರೋಧಿಸುತ್ತಾರೆ ಎಂದು ಭಾವಿಸಿರಲಿಲ್ಲ. ಅವರಿಗೆ ಕುಟುಂಬವೇ ದೇಶ, ಆದರೆ ನನಗೆ ದೇಶವೇ ಕುಟುಂಬ’ ಎಂದಿದ್ದಾರೆ.
‘ನನ್ನ ಅನುಭವದಿಂದ ಹೇಳುತ್ತೇನೆ. ದುರಾಸೆಯಿದ್ದವರು ರಾಜಕೀಯಕ್ಕಾಗಿ ಮೊಸಳೆ ಕಣ್ಣೀರು ಹಾಕುತ್ತಾರೆ. ಓಲೈಕೆಯ ರಾಜಕಾರಣ ಮಾಡುತ್ತಾರೆ. ಆದರೆ ನಿಜವಾಗಿಯೂ ಜನರ ಬಗ್ಗೆ ಚಿಂತನೆ ಮಾಡುವವರು ಅಭಿವೃದ್ಧಿ ಕಾರ್ಯ ಮಾಡುತ್ತಾರೆ’ ಎಂದಿದ್ದಾರೆ.
‘ದಲಿತ ದೌರ್ಜನ್ಯದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದ್ದೇವೆ. ರಾಜಕೀಯಕ್ಕಾಗಿ ಸುಪ್ರೀಂಕೋರ್ಟ್ ಆದೇಶವನ್ನೇ ಕಾಂಗ್ರೆಸ್ ಸುಳ್ಳು ಮಾಡಿ ಹೇಳುತ್ತಿದೆ. ದಲಿತ ಮೀಸಲಾತಿ ಅಥವಾ ದಲಿತ ದೌರ್ಜನ್ಯವಿರಲಿ ತಮ್ಮ ಹೇಳಿಕೆ ದೇಶದಲ್ಲಿ ಯಾವ ತರನಾದ ಅಸ್ಥಿರತೆ ಉಂಟು ಮಾಡಬಹುದು ಎಂಬುದರ ಬಗ್ಗೆ ಅವರಿಗೆ ಕಾಳಜಿಯಿಲ್ಲ’ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.