ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕಾಮನ್ವೆಲ್ತ್ ಪದಕ ವಿಜೇತರೊಂದಿಗೆ ಸಂವಾದ ನಡೆಸಿದರು. ವಿಜೇತರನ್ನು ಅಭಿನಂದಿಸಿದ ಮೋದಿ, ಪದಕ ಜಯಿಸದೆಯೂ ಕ್ರೀಡಾಕೂಟದಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಳುಗಳನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಕ್ರೀಡಾ ಕ್ಷೇತ್ರದ ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನಿಮ್ಮ ಕ್ರೀಡಾ ಸಾಧನೆ ಭಾರತದ ಘನತೆಯನ್ನು ಹೆಚ್ಚಿಸಿದೆ, ಪ್ರತಿ ಬಾರಿ ಭಾರತೀಯ ಕ್ರೀಡಾಳು ಗೆದ್ದಾಗ ತ್ರಿವರ್ಣ ಧ್ವಜ ಮೇಲೇರುತ್ತದೆ’ ಎಂದು ಮೋದಿ ವಿಜೇತರಲ್ಲಿ ಹೇಳಿದರು.
ಕ್ರೀಡಾಳುವಿನ ಬದುಕು ಹಲವು ದಶಕಗಳನ್ನು ವ್ಯಾಪಿಸಿದ್ದಾಗಿದೆ ಎಂದ ಅವರು, ಸಂಸತ್ತು ಸದಸ್ಯೆಯೂ ಆದ ಮೇರಿಕೋಮ್. ಕೋಚ್ ಪುಲ್ಲೆಲಾ ಗೋಪಿಚಂದ್ ಉದಾಹರಣೆಗಳನ್ನು ನೀಡಿದರು. ಕ್ರೀಡಾಳುಗಳಾದ ಬಳಿಕವೂ ಅವರು ತಮ್ಮನ್ನು ತಾವು ಕ್ರೀಡೆಯಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಿದರು.
ಪ್ರತಿಭೆ ಮಾತ್ರವಲ್ಲದೇ ತರಬೇತಿ, ಶ್ರದ್ಧೆ, ಶ್ರಮ, ಮಾನಸಿಕ ದೃಢತೆ ಕ್ರೀಡಾಳುವಿಗೆ ಅತ್ಯಗತ್ಯ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.