ಇಂಫಾಲ: ಈಶಾನ್ಯ ಪ್ರದೇಶ ಭಾರತದ ಪ್ರಗತಿಯ ಎಂಜಿನ್ ಆಗಿದೆ, ದೇಶದ ಅಭಿವೃದ್ಧಿಯ ಪಥ ಈಶಾನ್ಯ ಭಾಗದ ಪ್ರಗತಿಗೆ ಅನುಗುಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಣಿಪುರ ವಿಶ್ವವಿದ್ಯಾನಿಲಯದಲ್ಲಿ 105ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಈಶಾನ್ಯದ ಪ್ರಗತಿಯನ್ನು ಹೊರತುಪಡಿಸಿ ಭಾರತದ ಅಭಿವೃದ್ಧಿ ಕಥೆ ಪರಿಪೂರ್ಣವಾಗದು ಎಂಬುದನ್ನು ನಾನು ವಾದಿಸುತ್ತಲೇ ಬಂದಿದ್ದೇನೆ, ಈಶಾನ್ಯ ಭಾರತದ ಪ್ರಗತಿಯ ಹೊಸ ಎಂಜಿನ್’ ಎಂದಿದ್ದಾರೆ.
ಮೋದಿ ಬಳಿಕ ಒಂದು ಸಾವಿರ ಅಂಗನವಾಡಿ ಕೇಂದ್ರಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.
‘ಈ ಅಂಗನವಾಡಿ ಕೇಂದ್ರಗಳು ಸಾವಿರಾರು ತಾಯಂದಿರು ಮತ್ತು ಮಕ್ಕಳ ಆರೋಗ್ಯ ರಕ್ಷಿಸುವ ಕಾರ್ಯವನ್ನು ಮಾಡಲಿದೆ. ಇತ್ತೀಚಿಗೆ ಜಾರಿಗೊಂಡ ರಾಷ್ಟ್ರೀಯ ಪೌಷ್ಠಿಕ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳಲಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.