ಲಕ್ನೋ: ಅಯೋಧ್ಯಾ ಮಾತ್ರವಲ್ಲದೇ ವಾರಣಾಸಿ ಮತ್ತು ಮಥುರಾದಲ್ಲೂ ಅದ್ಧೂರಿ ದೀಪಾವಳಿ ಸಮಾರಂಭವನ್ನು ಏರ್ಪಡಿಸಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದ್ದಾರೆ.
ಗುರುವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅ.18ರ ದೀಪಾವಳಿಯಂದು ಅಯೋಧ್ಯಾದಲ್ಲಿ ದೀಪಾವಳಿ ಸಮಾರಂಭದಲ್ಲಿ ಯೋಗಿ ಭಾಗಿಯಾಗಲಿದ್ದಾರೆ. ಮಥುರಾ, ವಾರಣಾಸಿಯಲ್ಲೂ ಬಿಜೆಪಿಯ ಉನ್ನತ ನಾಯಕರು ದೀಪಾವಳಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ದೀಪಾವಳಿಯ 15 ದಿನಗಳ ಬಳಿಕ ವಾರಣಸಿಯಲ್ಲಿ ದೇವ್ ದೀಪಾವಳಿ ನಡೆಯಲಿದೆ. ಈ ವೇಳೆ ಭಕ್ತಾದಿಗಳು ಕಾಶಿ ವಿಶ್ವನಾಥನಿಗೆ ಸಾವಿರಾರು ತುಪ್ಪದ ದೀಪಗಳನ್ನು ಹಚ್ಚುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.