ನವದೆಹಲಿ: ಇನ್ನು ನಾಲ್ಕು ತಿಂಗಳಲ್ಲಿ ಪ್ರವಾಸಿಗರು ವಿಶ್ವವಿಖ್ಯಾತ ತಾಜ್ಮಹಲನ್ನು ಸ್ಪರ್ಶಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಇದರ ಸುತ್ತಲೂ ಮರದ ಮತ್ತು ಗ್ಲಾಸಿನ ಬ್ಯಾರಿಕೇಡ್ಗಳನ್ನು ರಚಿಸಲು ಪುರಾತತ್ವ ಇಲಾಖೆ ನಿರ್ಧರಿಸಿರುವುದೇ ಇದಕ್ಕೆ ಕಾರಣ.
ಈ ಐತಿಹಾಸಿಕ ಸ್ಮಾರಕದ ಹೊಳೆಯುವ ಬಿಳಿ ಹೊಳಪು ತನ್ನ ಆಕರ್ಷನೆಯನ್ನು ಇತ್ತೀಚಿನ ದಿನಗಳಲ್ಲಿ ಕಳೆದುಕೊಳ್ಳುತ್ತಿದೆ. ಅಲ್ಲಿಗೆ ಆಗಮಿಸುತ್ತಿರುವ ಸಾವಿರಾರು ಪ್ರಸಾಸಿಗರು ಅದನ್ನು ಸ್ಪರ್ಶಿಸುತ್ತಿರುವುದೇ ಹೊಳಪು ಕುಂಠಿತವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಹೀಗಾಗೀ ಜನ ಸ್ಪರ್ಶಿಸದಂತೆ ಸುತ್ತಲೂ ಬ್ಯಾರಿಕೇಡ್ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ವಿಜ್ಞಾನ, ತಂತ್ರಜ್ಞಾನ, ಪರಿಸರ, ಅರಣ್ಯದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ವಿನ್ ಕುಮಾರ್ ಹೇಳಿದ್ದಾರೆ.
5.5 ಕೋಟಿಯ ಯೋಜನೆಯಿದಾಗಿದ್ದು, 2015 ಅಂತ್ಯಕ್ಕೆ ಇದು ಅಂತ್ಯಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಅದೇನೆಯಿರಲಿ ಜಗತ್ತಿನ 7ನೇ ಅದ್ಭುತವನ್ನು ಮುಟ್ಟಿ ಆನಂದಿಸುವ ಅವಕಾಶವನ್ನು ಇನ್ನು ಮುಂದೆ ಪ್ರವಾಸಿಗರು ಕಳೆದುಕೊಳ್ಳುತ್ತಿರುವುದಂತು ನಿಜ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.