ನವದೆಹಲಿ : ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ಮುದ್ರಾ ಸಾಲ ಯೋಜನೆಗಳ ಟಾಪ್ 3 ಫಲಾನುಭವಿ ರಾಜ್ಯಗಳಾಗಿ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ಹೊರಹೊಮ್ಮಿದೆ.
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮ, ವ್ಯಾಪಾರಕ್ಕೆ ಸಾಲ ನೀಡಲಾಗುತ್ತಿದ್ದು, 2015-16 ನೇ ಸಾಲಿನಲ್ಲಿ ಕರ್ನಾಟಕದ ಜನತೆ 16,469.43 ಕೋಟಿ ರೂ. ಸಾಲವನ್ನು ಪಡೆದಿದ್ದಾರೆ.
ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, ಇಲ್ಲಿನ ಜನರು 15,496.86 ಕೋಟಿ ರೂ. ಸಾಲವನ್ನು ಪಡೆದಿದ್ದಾರೆ.
ಮೂರನೇ ಸ್ಥಾನದಲ್ಲಿರುವ ಮಹಾರಾಷ್ಟ್ರದ ಜನತೆ 13,372.42 ಕೋಟಿ ರೂ. ಸಾಲವನ್ನು ಪಡೆದಿದ್ದಾರೆ.
ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಸಂತೋಷ್ ಕುಮಾರ್ ಗಂಗಾರಾಮ್ ಅವರು ನೀಡಿದ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಒಟ್ಟು 44.59 ಲಕ್ಷ ಕನ್ನಡಿಗರು ಈ ಸಾಲವನ್ನು ಪಡೆದುಕೊಂಡಿದ್ದಾರೆ. 47.81 ಲಕ್ಷ ತಮಿಳಿಗರು, 35.35 ಲಕ್ಷ ಮಹಾರಾಷ್ಟ್ರಿಗರು ಸಾಲ ಸೌಲಭ್ಯವನ್ನು ಪಡೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಶೇ. 83 ರಷ್ಟು ಮಹಿಳೆಯರಿಗೆ ಸಾಲವನ್ನು ಹಂಚಲಾಗಿದೆ. ಒರಿಸ್ಸಾದಲ್ಲಿ ಅತಿ ಹೆಚ್ಚು ಶೇ. 90 ರಷ್ಟು ಮಹಿಳೆಯರಿಗೆ ಸಾಲವನ್ನು ನೀಡಲಾಗಿದೆ.
ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಶೇ. 87 ರಷ್ಟು ಮಹಿಳೆಯರಿಗೆ ಸಾಲ ಹಂಚಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.