ನವದೆಹಲಿ: ಫೆಬ್ರವರಿ 2011ರಲ್ಲಿ ಉತ್ತರ ಪ್ರದೇಶದ ಶಹಜಾನ್ಪುರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟ 18 ಜನರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ಸುಪ್ರೀ ಕೋರ್ಟ್ ನೀಡಿದೆ.
ಮುಖ್ಯ ನ್ಯಾಯಮುರ್ತಿ ಜಸ್ಟೀಸ್ ಟಿಎಸ್ ಠಾಜಕುರ್ ಮತ್ತು ಜಸ್ಟೀಸ್ ಯ.ಯು. ಲಲಿತ್ ಅವರ ಅವರ ನ್ಯಾಯಪೀಠ ಶಾಶ್ವತ ಅಂಗವೈಕಲ್ಯ ಎದುರಿಸುತ್ತಿರುವ ಕುಟುಂಬಗಳಿಗೆ ರೂ. 1.5 ಲಕ್ಷ, ಗಂಭೀರ ಗಾಯಗೊಂಡವರಿಗೆ 50,000 ಹಾಗೂ ಸಣ್ಣ ಪ್ರಮಾಣದ ಗಾಯಗಳಾದವರಿಗೆ ರೂ. 25,000 ಪರಿಹಾರ ನೀಡಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆಗೆ ಕೋರ್ಟ್ ಸೂಚನೆ ನೀಡಿದೆ.
ಇಂಡೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಉದ್ಯೋಗ ನೇಮಕಾತಿಗೆ 11 ರಾಜ್ಯಗಳ ಸುಮಾರು 1,50,000 ಮಂದಿ ಅರ್ಜಿ ಸಲ್ಲಿಸಿ ಹಿಮಗಿರಿ ಎಕ್ಸ್ಪ್ರೆಸ್ ಮತ್ತು ತರಿವೇಣಿ ಎಕ್ಸ್ಪ್ರೆಸ್ ರೈಲುಗಳಲ್ಲಿ ಹಿಂದಿರುಗುತ್ತಿದ್ದ ಸಂದರ್ಭ ರೈಲು ಸೇತುವೆ ಬಡಿದಿತ್ತು. ಕೆಲವು ಪ್ರಯಾಣಿಕರು ಸೇತುವೆಯ ಮೇಲಆವಣಿ ಬಡಿದು ಹಾಗೂ ಇನ್ನು ಕೆಲವರು ರೈಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.