ಕೋಲ್ಕತ್ತಾ: ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮಬಂಗಾಳ ಜನತೆಗೆ ಇದೀಗ ಸುಲಭದಲ್ಲಿ ನೀರು ಲಭ್ಯವಾಗುವಂತೆ ವಾಟರ್ ಎಟಿಎಂಗಳನ್ನು ಆರಂಭಿಸಲಾಗಿದೆ. ಎರಡು ರೂಪಾಯಿಗೆ ಎರಡು ಲೀಟರ್ ನೀರು ಈ ಎಟಿಎಂಗಳಲ್ಲಿ ಲಭ್ಯವಾಗಲಿದೆ.
ಇಲ್ಲಿ ಲಭ್ಯವಾಗುವ ಶುದ್ಧ, ತಂಪಾದ ಕುಡಿಯುವ ನೀರು ಕೋಲ್ಕತ್ತಾದ ಜನತೆಗೆ ತುಸು ರಿಲೀಫ್ ನೀಡಿದೆ. ದಕ್ಷಿಣ ಕೋಲ್ಕತ್ತಾದ ಎಕ್ಡಲಿಯಾದಲ್ಲಿ ವಾಟರ್ ಎಟಿಎಂನ್ನು ಸ್ಥಾಪಿಸಲಾಗಿದೆ.
ಬಿಸ್ಲರಿ ಬಾಟಲ್ಗೆ ರೂ. 20 ನೀಡಬೇಕಾಗುತ್ತದೆ. ಆದರೆ ಅಷ್ಟೇ ಪರಿಶುದ್ಧವಾದ ನೀರು ಇಲ್ಲಿ 2 ರೂಪಾಯಿ ನೀಡಿದರೆ 2 ಲೀಟರ್ ದೊರೆಯುತ್ತದೆ. ಇದು ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಇದೇ ರೀತಿಯ ಹಲವಾರು ವಾಟರ್ ಎಟಿಎಂಗಳನ್ನು ಪಶ್ಚಿಮಬಂಗಾಳದ ವಿವಿಧ ಹಳ್ಳಿಗಳಲ್ಲೂ ಸ್ಥಾಪಿಸಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ.
ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಲ್ಲೂ ಈ ವಾಟರ್ ಎಟಿಎಂಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.