ಜಮ್ಮು: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಶನಿವಾರದಿಂದ ಆರಂಭಗೊಳ್ಳುತ್ತಿದ್ದು, ಅದಕ್ಕಾಗಿ 1,138 ಮಂದಿಯನ್ನು ಒಳಗೊಂಡ ಮೊದಲ ತಂಡ ಜಮ್ಮು ಇಂದ ಶುಕ್ರವಾರ ಪ್ರಯಾಣ ಆರಂಭಿಸಿದ್ದಾರೆ.
ಬೆಳಿಗ್ಗೆ 5 ಗಂಟೆಗೆ ಚಳಿಗಾಲದ ರಾಜಧಾನಿ ಎಂದೇ ಕರೆಯಲ್ಪಡುವ ಜಮ್ಮುವಿನ ಭಗವತಿ ನಗರ್ ಯಾತ್ರಿ ನಿವಾಸ್ನಿಂದ ಯಾತ್ರೆ ಆರಂಭವಾಗಿದ್ದು, ರಾಜ್ಯ ಪೊಲೀಸ್ ಉಪ ಆಯುಕ್ತ ನಿರ್ಮಲ್ ಸಿಂಗ್, ಕಿರಿಯ ಸಚಿವ ಪ್ರಿಯ ಸೇತಿ, ಲೋಕಸಭಾ ಸದಸ್ಯ ಜುಗಲ್ ಕಿಶೋರ್ ಧ್ವಜ ಹಾರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಮೊದಲ ತಂಡದಲ್ಲಿ 900ಪುರುಷರು, 225 ಮಹಿಳೆಯರು, 13 ಮಕ್ಕಳು ಇದ್ದಾರೆ. ಒಟ್ಟು 13 ಬಸ್, 24 ಮಿನಿ ಬಸ್, ಮತ್ತಿತರ ಸಾರ್ವಜನಿಕ ಮತ್ತು ಖಾಸಗಿ ವಾಹನಗಳಲ್ಲಿ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಯಾತ್ರಿಕರು ಯಾತ್ರೆ ಆರಂಭಿಸಿದ್ದಾರೆ.
ಈ ಬಾರಿ ಅಮರನಾಥ ಯಾತ್ರೆಗೆ ಭದ್ರತೆ ಒದಗಿಸುವುದೇ ರಾಜ್ಯ ಸರ್ಕಾರ, ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಗ್ರರ ಬೆದರಿಕೆ ಎಂದಿಗಿಂತ ತುಸು ಹೆಚ್ಚೇ ಇದೆ ಎನ್ನಲಾಗಿದೆ.
ಶನಿವಾರ ಆರಂಭಗೊಳ್ಳುವ ಯಾತ್ರೆ 48 ದಿನಗಳ ಕಾಲ ಮುಂದುವರೆಯಲಿದ್ದು, ಆ.18ರ ರಕ್ಷಾಬಂಧನ ಮತ್ತು ಶ್ರವಣ ಪೂರ್ಣಿಮಾದಂದು ಅಂತ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.