ನವದೆಹಲಿ: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣುತ್ತಿರುವುದು ಬಹುಶಃ ಭಾರತದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೊಂದು. ಈ ಕ್ರಿಕೆಟಿಗರು ನೂರಾರು ಡೀಲ್ಗಳಿಗೆ ಸಹಿ ಹಾಕುತ್ತಿರುವುದು, ತಮ್ಮ ತಲೆ ಕೂದಲಿಗೆ ಬಳಸುವ ತೈಲಗಳು, ಶೂಗಳು, ತಮ್ಮದೇ ಹೆಸರಿನ ಬಟ್ಟೆಗಳ ಲೇಬಲ್ಗಳು, ಮೋಟಾರ್ ವಾಹನಿಗಳಿಗೆ ಒಬ್ಬ ಸಾಮಾನ್ಯ ಮನುಷ್ಯನ 3 ವರ್ಷದ ಸಂಬಳದಷ್ಟು ವ್ಯಯಿಸುತ್ತಿದ್ದಾರೆ.
ಕ್ರಿಕೆಟಿಗರು ರಾಕ್ಸ್ಟಾರ್ಗಳಂತೆ ಜೀವಿಸುತ್ತಿದ್ದರೆ, ಭಾರತದಲ್ಲಿ ಇತರ ಕ್ರೀಡೆಗಳು ಕ್ರಿಕೆಟ್ನಷ್ಟು ಮಾನ್ಯತೆ ಪಡೆದಿಲ್ಲ. ಕ್ರಿಕೆಟ್ ಅಲ್ಲದೇ ಇತರ ಕ್ರೀಡೆಗಳ ಕ್ರೀಡಾಪಟುಗಳು ತಮ್ಮ ಜೀವನ ನಿರ್ವಹಣೆಗಾಗಿ ಕ್ರಿಕೆಟಿಗರಿಗಿಂತ 3 ಪಟ್ಟು ಹೆಚ್ಚು ಶ್ರಮಿಸುವಂತಹ ಪರಿಸ್ಥಿತಿ ಎದುರಾಗಿದೆ.
ಇದಕ್ಕೆ ಉದಾಹರಣೆ ರಾಷ್ಟ್ರ ಮಟ್ಟದ ಚಿನ್ನದ ಪದಕ ವಿಜೇತ ಬಾಕ್ಸರ್ ಕಮಲ್ ಕುಮಾರ್. ಆತ ತನ್ನ ಜೀವನ ನಿರ್ವಹಣೆಗಾಗಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿ, ಕಸ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾನೆ. ರಾಷ್ಟ್ರ ಮಟ್ಟದ ಈ ಕ್ರೀಡಾಪಟುವಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ದೊರೆಯದಿರುವುದು ಇದರ ಪ್ರಮುಖ ಕಾರಣ.
ಕಮಲ್ ಕುಮಾರ್ ಕುಟಂಬ ಆತನ ಮೇಲೆ ಅವಲಂಬಿತವಾಗಿದ್ದು, ಯಾವುದೇ ಉದ್ಯೋಗ ಪಡೆಯಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಕೆಲಸದಲ್ಲಿ ತೊಡಗಿವುದಾಗಿ ಕಮಲ್ ಹೇಳಿದ್ದಾರೆ.
ರಾಷ್ಟ್ರದ ಹಿರಿಮೆ ಹೆಚ್ಚಿಸುವ ಕನಸು, ಉತ್ಸಾಹ ಹೊಂದಿದ್ದ ಕಮಲ್ ಕುಮಾರ್ರ ನಾಲ್ವರು ಮಕ್ಕಳಲ್ಲಿ ಹಿರಿಯ ಪುತ್ರ ರಾಷ್ಟ್ರ ಮಟ್ಟದ ಬಾಕ್ಸರ್ ಆಗಿದ್ದು, ಆತನಿಗೆ ತರಬೇತಿ ನೀಡುತ್ತಿದ್ದಾರೆ. ಆತ ತನ್ನ ಕನಸನ್ನು ಪೂರೈಸುವ ವಿಶ್ವಾಸವಿದೆ ಎಂದು ಕಮಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.