ದೆಹಲಿ: ಯೋಗಗುರು ರಾಮ್ದೇವ್ ಬಾಬಾರಿಗೆ ಹೊಸ ಅಭಿಮಾನಿಯೊಬ್ಬರು ಸಿಕ್ಕಿದ್ದಾರೆ, ಅವರೇ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್. ಇದುವರೆಗೆ ಒಬ್ಬರ ಮೇಲೊಬ್ಬರು ಸದಾ ಹರಿಹಾಯುತ್ತಿದ್ದರು, ಆದರೀಗ ಪರಿಸ್ಥಿತಿ ಬದಲಾದಂತೆ ಕಂಡು ಬರುತ್ತಿದೆ.
ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ರಾಮ್ದೇವ್ ಬಾಬಾರನ್ನು ಭೇಟಿಯಾದ ಲಾಲೂ, ಬಾಬಾರವರ ಯಶಸ್ಸನ್ನು ಕಂಡು ಹಲವಾರು ಮಂದಿ ಅಸೂಯೆ ಪಟ್ಟುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಬಾಬಾ ಅವರ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ, ಅವರು ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೆ. ಅವರು ಗಳಿಸಿದೆಲ್ಲವನ್ನೂ ಚಾರಿಟಿಗೆ ನೀಡುತ್ತಿದ್ದಾರೆ. ತಮ್ಮ ಸ್ವಶ್ರಮದಿಮದ ಅವರು ಎಲ್ಲವನ್ನೂ ಗಳಿಸಿದ್ದಾರೆ ಎಂದು ಹಾಡಿಹೊಗಳಿದ್ದಾರೆ.
ಕೆಲವರು ಬಾಬಾ ಅವರ ಉತ್ಪನ್ನಗಳನ್ನು, ಅವರನ್ನು ಅವಮಾನ ಮಾಡಲು ಕುತಂತ್ರಗಳನ್ನು ಮಾಡುತ್ತಲೇ ಇದ್ದಾರೆ ಎಂದಿದ್ದಾರೆ. ಅಲ್ಲದೇ ನಾನು ಅವರ ಉತ್ಪನ್ನಗಳ ಖಾಯಂ ರಾಯಭಾರಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.