ರಾಮೇಶ್ವರಂ: ಐದು ತಿಂಗಳ ಹಿಂದೆ ಭಾರತ ತನ್ನ ಕ್ಷಿಪಣಿ ಮಾನವ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಕಳೆದುಕೊಂಡಿತು. ಅವರ ಸಾವು ಸಮಸ್ತ ಭಾರತೀಯರನ್ನು ದುಃಖಕ್ಕೆ ತಳ್ಳಿತ್ತು. ಆದರೀಗ ಅವರ ಸಮಾಧಿ ಇರುವ ತಾಣದಲ್ಲಿ ಈಗ ನಾಯಿ, ದನಗಳು ಮಲ, ಮೂತ್ರ ವಿಸರ್ಜಿಸುತ್ತಿವೆ, ಜನರು ಅಲ್ಲೇ ತ್ಯಾಜ್ಯಗಳನ್ನು ಬಿಸಾಡಿ ಮಲಿನ ಮಾಡುತ್ತಿದ್ದಾರೆ.
ರಾಮೇಶ್ವರಂನ ಪೇಯಿ ಕುರಂಬುನಲ್ಲಿ ಕಲಾಂ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿತ್ತು, ಆ ವೇಳೆ ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಅವರನ್ನು ಮಣ್ಣು ಮಾಡಲಾದ ಸ್ಥಳದಲ್ಲಿ ಮೆಮೋರಿಯಲ್ ನಿರ್ಮಿಸುವ ಯೋಜನೆಗೆ ಮಾತ್ರ ಇನ್ನೂ ಚಾಲನೆ ಸಿಕ್ಕಿಲ್ಲ. ಅದರ ಅಕ್ಕಪಕ್ಕದ ಜಾಗದಲ್ಲಿ ಜನ. ಕಸಕಡ್ಡಿಗಳನ್ನು ತಂದು ಹಾಕಿ ಗಬ್ಬು ನಾರುವಂತೆ ಮಾಡುತ್ತಿದ್ದಾರೆ. ಪ್ರಾಣಿಗಳು ರಾಜರೋಷವಾಗಿ ಅಡ್ಡಾಡುತ್ತಿವೆ.
ಅಲ್ಲದೇ ಅವರ ಸಮಾಧಿಯ ಜಾಗದಲ್ಲಿ ಇಡಲಾದ ಬ್ಯಾರಿಕೇಡ್ಗಳನ್ನು ದಾಟಿ ಜನ ಫೋಟೋ ತೆಗೆಯುತ್ತಿದ್ದಾರೆ. ಇಲ್ಲಿ ತಾತ್ಕಲಿಕ ರಚನೆಯೊಂದನ್ನು ನಿರ್ಮಿಸಲಾಗಿದ್ದರೂ ಮೆಮೋರಿಯಲ್ ಕಟ್ಟುವ ಯೋಜನೆ ಇನ್ನೂ ಆರಂಭವಾಗಿಲ್ಲ. ಇನ್ನೊಂದೆಡೆ ಸಮಾಧಿ ಸ್ಥಳ ಹದಗೆಡುತ್ತಿದೆ, ಇದಕ್ಕೆ ಕಲಾಂ ಕುಟುಂಬ ಬೇಸರ ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ನೀಡಬೇಕು ಎಂದು ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.