
ನವದೆಹಲಿ: ಪಾಕಿಸ್ಥಾನ ಬೆಂಬಲಿತ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರು ನವೆಂಬರ್ 26, 2008 ರಂದು ಭಾರತದ ಆರ್ಥಿಕ ರಾಜಧಾನಿ ಮುಂಬೈನ ಬೀದಿಗಳಲ್ಲಿ ಸರಣಿ ಬಾಂಬ್ ದಾಳಿ ನಡೆಸಿದ ಕರಾಳ ನೆನಪಿಗೆ ಇಂದಿಗೆ 17 ವರ್ಷಗಳು ತುಂಬಿವೆ.
ಸಾಮಾನ್ಯವಾಗಿ 26/11 ಎಂದು ಕರೆಯಲ್ಪಡುವ 10 ಭಯೋತ್ಪಾದಕರ ಗುಂಪಿನಿಂದ ನಡೆದ ಈ ಸಂಘಟಿತ ದಾಳಿಗಳು ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಆಘಾತವನ್ನು ಸೃಷ್ಟಿಸಿದ್ದವು. ಭಯೋತ್ಪಾದಕರು ನವೆಂಬರ್ 26, 2008 ರ ರಾತ್ರಿ ಸಮುದ್ರ ಮಾರ್ಗದ ಮೂಲಕ ಮುಂಬೈ ನಗರವನ್ನು ಪ್ರವೇಶಿಸಿದ್ದರು ಮತ್ತು ನಾಲ್ಕು ದಿನಗಳ ಅವಧಿಯಲ್ಲಿ, ನಗರದ ಕೆಲವು ಜನನಿಬಿಡ ಭಾಗಗಳಲ್ಲಿ ದಾಳಿ ನಡೆಸಿ 166 ಜನರನ್ನು ಕೊಂದರು ಮತ್ತು 300 ಜನರನ್ನು ಗಾಯಗೊಳಿಸಿದರು.
ಜನನಿಬಿಡ ತಾಜ್ ಮತ್ತು ಒಬೆರಾಯ್ ಹೋಟೆಲ್ಗಳು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ನಾರಿಮನ್ ಹೌಸ್ನಲ್ಲಿರುವ ಯಹೂದಿ ಕೇಂದ್ರ, ಕಾಮಾ ಆಸ್ಪತ್ರೆ, ಮೆಟ್ರೋ ಸಿನೆಮಾ ಮತ್ತು ಲಿಯೋಪೋಲ್ಡ್ ಕೆಫೆಯನ್ನು ಉಗ್ರರು ತಮ್ಮ ಟಾರ್ಗೆಟ್ ಮಾಡಿಕೊಂಡಿದ್ದರು, ಏಕೆಂದರೆ ಈ ಸ್ಥಳಗಳಿಗೆ ವಿದೇಶಿ ಪ್ರಜೆಗಳು ಹೆಚ್ಚಾಗಿದ್ದರು ಮತ್ತು ಮುಂಬೈನ ಹೆಚ್ಚಿನ ಜನಸಂಖ್ಯೆ ಇಲ್ಲಿ ಬಂದು ಸೇರುತ್ತಿತ್ತು.
ಈ ದುರಂತ ಘಟನೆಯಿಂದ ಉಂಟಾದ ಗಾಯದ ಗುರುತುಗಳು ಇಂದಿಗೂ ದಾಳಿಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಕಾಡುತ್ತಿವೆ. ಲಿಯೋಪೋಲ್ಡ್ ಕೆಫೆ ಮತ್ತು ನಾರಿಮನ್ ಹೌಸ್ನಲ್ಲಿನ ಗುಂಡುಗಳ ಗುರುತುಗಳು, ಅಜ್ಮಲ್ ಅಮೀರ್ ಕಸಬ್ನನ್ನು ಸೆರೆಹಿಡಿಯುವಾಗ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸಹಾಯಕ ಸಬ್-ಇನ್ಸ್ಪೆಕ್ಟರ್ ತುಕಾರಾಂ ಓಂಬ್ಲೆ ಅವರ ಪ್ರತಿಮೆ ಮತ್ತು ದಕ್ಷಿಣ ಮುಂಬೈನ ಬೀದಿಗಳು ಭೀಕರ ಭಯೋತ್ಪಾದಕ ದಾಳಿಯ ಸ್ಮರಣೆಯನ್ನು ಇಂದಿಗೂ ಜೀವಂತವಾಗಿರಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



