ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಅಂತರರಾಷ್ಟ್ರೀಯ ಸಹಕಾರಿ ವರ್ಷದ ಸಂದರ್ಭದಲ್ಲಿ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಹಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಮಹಿಳೆಯರು ಮತ್ತು ಇತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಕಚ್ ಜಿಲ್ಲೆಯ ಒಂಟೆ ಸಾಕಾಣೆ ಮಾಲ್ಧಾರಿ ಸಹಕಾರಿ ಸಂಘದ ಮಿರಾಲ್ಬೆನ್ ರಬಾರಿ ಅವರೊಂದಿಗೆ ಶಾ ಅವರು ಸಂವಾದ ನಡೆಸಿದ ಸಮಯದಲ್ಲಿ, ಮಿರಾಲ್ಬೆನ್ ಅವರು ಒಂಟೆ ಹಾಲಿನ ಕೆಮಿಕಲ್ ಪರೀಕ್ಷೆಯನ್ನು ನಡೆಸುವಂತೆ ಮತ್ತು ಸಂಶೋಧನೆ ನಡೆಸುವಂತೆ ವಿನಂತಿಸಿದರು. , ಇದಕ್ಕೆ ಶಾ ಅವರು ನಾಲ್ಕು ಆಯುರ್ವೇದ ಕಂಪನಿಗಳು ಒಂಟೆ ಹಾಲಿನ ಔಷಧೀಯ ಗುಣಗಳನ್ನು ಪರೀಕ್ಷಿಸುತ್ತಿವೆ ಎಂದು ಉತ್ತರಿಸಿದರು.
ಒಂದು ಕಂಪನಿ ಈಗಾಗಲೇ ಈ ಕೆಲಸವನ್ನು ಪೂರ್ಣಗೊಳಿಸಿದೆ. ಗುಜರಾತ್ ಮತ್ತು ರಾಜಸ್ಥಾನ ಸರ್ಕಾರಗಳು ಜಂಟಿಯಾಗಿ ದೇಶಾದ್ಯಂತ ಒಂಟೆ ಸಾಕಣೆದಾರರಿಂದ ಹಾಲು ಸಂಗ್ರಹಿಸಿ ಅದರ ಔಷಧೀಯ ಗುಣಗಳನ್ನು ಬಳಸಿಕೊಂಡು ಹೆಚ್ಚಿನ ಬೆಲೆಯನ್ನು ಪಡೆಯುವ ಯೋಜನೆಯನ್ನು ರೂಪಿಸುತ್ತಿವೆ ಎಂದು ಶಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.