
ಲಂಡನ್ನಲ್ಲಿ ಚಾಥಮ್ ಹೌಸ್ ಥಿಂಕ್ ಟ್ಯಾಂಕ್ ನಿರ್ದೇಶಕ ಬ್ರಾನ್ವೆನ್ ಮ್ಯಾಡಾಕ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯೂನಸ್, ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಭವಿಷ್ಯ, ಮುಂಬರುವ “ಜುಲೈ ಚಾರ್ಟರ್” ಮತ್ತು ಭಾರತದೊಂದಿಗಿನ ದೇಶದ ಸಂಬಂಧ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.
ಸಂಭಾಷಣೆಯ ಸಮಯದಲ್ಲಿ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ನಮ್ಮ ಸರ್ಕಾರವು ಭಾರತಕ್ಕೆ ಅನೌಪಚಾರಿಕ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸಿದೆ ಎಂದು ಯೂನಸ್ ಹೇಳಿದರು. ಇಡೀ ಪ್ರಕ್ರಿಯೆಯು ತುಂಬಾ ಕಾನೂನುಬದ್ಧವಾಗಿರಬೇಕು, ಸರಿಯಾಗಿರಬೇಕು ಎಂದು ನಾವು ಬಯಸುತ್ತೇವೆ. ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಬಯಸುತ್ತೇವೆ. ಇದು ನಮ್ಮ ನೆರೆಯವರು, ಅವರೊಂದಿಗೆ ಯಾವುದೇ ರೀತಿಯ ಮೂಲಭೂತ ಸಮಸ್ಯೆಯನ್ನು ಹೊಂದಲು ನಾವು ಬಯಸುವುದಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಚರ್ಚೆಯ ವಿವರಗಳನ್ನು ಹಂಚಿಕೊಂಡ ಅವರು, “ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಾಗ ʼನೀವು ಶೇಖ್ ಹಸೀನಾ ಅವರಿಗೆ ಆತಿಥ್ಯ ವಹಿಸಿದ್ದೀರಿ, ಅದನ್ನು ಬದಲಾಯಿಸುವಂತೆ ನಾವು ಕೇಳಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರು ಬಾಂಗ್ಲಾದೇಶದ ಜನರೊಂದಿಗೆ ಆನ್ಲೈನ್ ಮೂಲಕ ಮಾತನಾಡದಂತೆ ನೋಡಿಕೊಳ್ಳಲು ದಯವಿಟ್ಟು ನಮಗೆ ಸಹಾಯ ಮಾಡಿʼ ಎಂದು ಮನವಿ ಮಾಡಿದ್ದೇ. ಆದರೆ ಅವರು ಹಸೀನಾ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು” ಎಂದಿದ್ದಾರೆ.
ಹಸೀನಾ ಅವರನ್ನು ಅಧಿಕಾರದಿಂದ ತೆಗೆದುಹಾಕಿದಾಗಿನಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಹಸೀನಾ ಅವರಿಗೆ ಭಾರತ ಆತಿಥ್ಯ ವಹಿಸಿರುವುದು ಬಾಂಗ್ಲಾ ಮುನಿಸಿಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.