ನವದೆಹಲಿ: ವಿದೇಶಾಂಗ ಸಚಿವಾಲಯದ ಸಮಾಲೋಚನಾ ಸಮಿತಿಯ ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು, ಪಾಕಿಸ್ಥಾನದ ವಿರುದ್ಧ ಭಾರತ ನಡೆಸಿದ ಮಿಲಿಟರಿ ದಾಳಿ ‘ಆಪರೇಷನ್ ಸಿಂಧೂರ್’ ನ ಸಮಯದ ಬಗ್ಗೆ ಕಾಂಗ್ರೆಸ್ ಪಕ್ಷವು “ಅಪ್ರಾಮಾಣಿಕ ತಪ್ಪು ನಿರೂಪಣೆ” ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ.
ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವ ಮುನ್ನ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂಬ ವಿರೋಧ ಪಕ್ಷದ ಹೇಳಿಕೆಗಳನ್ನು ನಿರಾಕರಿಸಿದ ಜೈಶಂಕರ್, ಕಾರ್ಯಾಚರಣೆ ಮುಗಿದ ನಂತರವೇ ಪಾಕಿಸ್ಥಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರನ್ನು (DGMO) ಸಂಪರ್ಕಿಸಲಾಗಿದೆ ಎಂದು ಸಮಿತಿಗೆ ತಿಳಿಸಿದರು.
“ಯಾವುದೇ ಪೂರ್ವ ಸಂವಹನ ಇರಲಿಲ್ಲ. ದಾಳಿಯ 30 ನಿಮಿಷಗಳ ನಂತರ, PIB ಮೊದಲ ಬಿಡುಗಡೆಯ ನಂತರವೇ ಪಾಕಿಸ್ಥಾನದಲ್ಲಿರುವ DGMO ಗೆ ಮಾಹಿತಿ ನೀಡಲಾಯಿತು” ಎಂದಿದ್ದಾರೆ.
ನವದೆಹಲಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತ NDA ಸದಸ್ಯರ ನಡುವೆ ಬಿಸಿ ವಾಗ್ವಾದದ ನಡುವೆ ಜೈಶಂಕರ್ ಅವರ ಹೇಳಿಕೆಗಳು ಬಂದವು. ಮೂಲಗಳ ಪ್ರಕಾರ, ಗಡಿಯಾಚೆಗಿನ ದಾಳಿಯ ನಂತರ ಸರ್ಕಾರವು ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನವನ್ನು ಸಕ್ರಿಯವಾಗಿ ಎದುರಿಸಿದೆ.
‘ಆಪರೇಷನ್ ಸಿಂಧೂರ್’ ಲಷ್ಕರ್-ಎ-ತೈಬಾ (LeT) ಮತ್ತು ಜೈಶ್-ಎ-ಮೊಹಮ್ಮದ್ (JeM) ನ ಪ್ರಧಾನ ಕಚೇರಿ ಸೇರಿದಂತೆ “ಭಯೋತ್ಪಾದನೆಯ ಕೇಂದ್ರಬಿಂದು”ವನ್ನು ಹೊಡೆದಿದೆ ಎಂದ ಜೈಶಂಕರ್, ಇದನ್ನು “ಹಿಂದಿನ ಯಾವುದೇ ಸರ್ಕಾರ ಮಾಡಲು ಧೈರ್ಯ ಮಾಡಲಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.