ಇಸ್ಲಾಮಾಬಾದ್: ಪಾಕಿಸ್ಥಾನದ ರೈಲು ಅಪಹರಣ ಪ್ರಕರಣದ ಹೊಣೆ ಹೊತ್ತುಕೊಂಡಿದ್ದ ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿಯು , ಎಲ್ಲಾ 214 ಒತ್ತೆಯಾಳುಗಳನ್ನು ಸಾಮೂಹಿಕವಾಗಿ ಕೊಂದು ಹಾಕಿರುವುದಾಗಿ ಹೇಳಿಕೊಂಡಿದೆ. ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಪಾಕಿಸ್ಥಾನ ಸೇನೆಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದೆವು ಆದರೆ ಅವರು ನಮ್ಮ ಎಚ್ಚರಿಕೆಯನ್ನು ಪಾಲಿಸದ ಕಾರಣ ಒತ್ತೆಯಾಳುಗಳನ್ನು ಕೊಂದು ಹಾಕಿದ್ದೇವೆ ಎಂದು ಲಿಬರೇಶನ್ ಆರ್ಮಿ ಹೇಳಿದೆ.
ಬಿಎಲ್ಎ ವಕ್ತಾರ ಜೀಯಂದ್ ಬಲೂಚ್ ಹೇಳಿಕೆ ನೀಡಿ, ಪಾಕಿಸ್ಥಾನಿ ಪಡೆಗಳಿಗೆ 48 ಗಂಟೆಗಳ ಅಂತಿಮ ಗಡುವು ನೀಡಿದ್ದೇವೆ, ಆದರೆ ಅವರು ಅದನ್ನು ಪಾಲಿಸದ ಕಾರಣ 214 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾನೆ.
“ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ಥಾನ ಸೈನ್ಯಕ್ಕೆ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು 48 ಗಂಟೆಗಳ ಅಂತಿಮ ಗಡುವನ್ನು ನೀಡಿತ್ತು, ಇದು ತನ್ನ ಸಿಬ್ಬಂದಿಯ ಜೀವಗಳನ್ನು ಉಳಿಸಲು ಆಕ್ರಮಿತ ಸೈನ್ಯಕ್ಕೆ ಕೊನೆಯ ಅವಕಾಶವಾಗಿತ್ತು. ಆದರೂ, ಪಾಕಿಸ್ಥಾನವು ತನ್ನ ಸಾಂಪ್ರದಾಯಿಕ ಮೊಂಡುತನ ಮತ್ತು ಮಿಲಿಟರಿ ದುರಹಂಕಾರವನ್ನು ಪ್ರದರ್ಶಿಸುತ್ತಾ ಗಂಭೀರ ಮಾತುಕತೆಗಳನ್ನು ತಪ್ಪಿಸಿದ್ದಲ್ಲದೆ, ನೆಲದ ವಾಸ್ತವಗಳ ಬಗ್ಗೆ ಕಣ್ಣು ಮುಚ್ಚಿದೆ. ಈ ಮೊಂಡುತನದ ಪರಿಣಾಮವಾಗಿ ಎಲ್ಲಾ 214 ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗಿದೆ” ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.