ನವದೆಹಲಿ: ಶಿಕ್ಷಣವು ಸಮಗ್ರ ಬೆಳವಣಿಗಾಗಿ ಇರುತ್ತದೆ. ವಿದ್ಯಾರ್ಥಿಗಳನ್ನು ಗೋಡೆಗಳೊಳಗೆ ಸೀಮಿತಗೊಳಿಸಬಾರದು. ಅವರಬೆಳವಣಿಗೆಗಾಗಿ, ಅಭಿರುಚಿಯನ್ನು ಅನ್ವೇಷಿಸಲು ಅವರಿಗೆ ಸ್ವಾತಂತ್ರ್ಯ ಬೇಕು.
ಪರೀಕ್ಷೆಯೇ ಎಲ್ಲಾ ಎಂಬ ಕಲ್ಪನೆಯೊಂದಿಗೆ ಯಾರೊಬ್ಬರೂ ಜೀವಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ತಮ್ಮ ಜನಪ್ರಿಯ ಸಂವಾದ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ’ದ ಎಂಟನೇ ಆವೃತ್ತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಪ್ರತಿ ವಿದ್ಯಾರ್ಥಿಯ ವಿಶಿಷ್ಟ ಪ್ರತಿಭೆಯನ್ನು ಕಂಡುಹಿಡಿಯುವುದು ಮತ್ತು ಪೋಷಿಸುವುದು ಶಿಕ್ಷಕರ ಕೆಲಸ. ಜನರಲ್ಲಿ ಒಳ್ಳೆಯದನ್ನು ಕಂಡುಹಿಡಿಯುವುದು ಎಲ್ಲದರಲ್ಲೂ ಸಕಾರಾತ್ಮಕತೆಯನ್ನು ಕಂಡುಹಿಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.ನಿಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಬರವಣಿಗೆಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ರೋಬೋಟ್ಗಳಲ್ಲ ಎಂದ ಪ್ರಧಾನಿ, ವಿದ್ಯಾರ್ಥಿಗಳು ಪುಸ್ತಕಗಳಲ್ಲಿ ಸಿಲುಕಿಕೊಂಡರೆ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪೌಷ್ಟಿಕಾಂಶ ಮತ್ತು ಯೋಗಕ್ಷೇಮದ ಮಹತ್ವವನ್ನು ಸಾರಿದ ಮೋದಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಆರೋಗ್ಯವಾಗಿಡಲು ಸಿರಿಧಾನ್ಯ ಮತ್ತು ತರಕಾರಿಗಳನ್ನು ತಿನ್ನುವಂತೆ ಸಲಹೆ ನೀಡಿದರು. ನಿದ್ರೆ ಪೌಷ್ಟಿಕಾಂಶದ ಮೇಲೆ ಅವಲಂಬಿತವಾಗಿದೆ, ವೈದ್ಯಕೀಯ ವಿಜ್ಞಾನವು ನಿದ್ರೆಯ ಮಹತ್ವವನ್ನು ಗುರುತಿಸುತ್ತದೆ ಎಂದು ಒತ್ತಿ ಹೇಳಿದರು. ಬೆಳಗಿನ ಬಿಸಿಲಿನಲ್ಲಿ ಸಮಯ ಕಳೆಯುವಂತೆ ಅವರು ವಿದ್ಯಾರ್ಥಿಗಳು ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳಿಗೆ ಒತ್ತಡವನ್ನು ನಿಯಂತ್ರಿಸುವ ಬಗ್ಗೆ ಸಲಹೆಗಳನ್ನು ನೀಡಿದರು, ಕಡಿಮೆ ಅಂಕಗಳು ಹೆಚ್ಚಾಗಿ ಮನೆಯಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಒಪ್ಪಿಕೊಂಡರು. ಈ ಒತ್ತಡಕ್ಕೆ ಒಳಗಾಗದೆ ತಯಾರಿ ನಡೆಸುವಂತೆ ಮತ್ತು ತಮ್ಮನ್ನು ತಾವು ಸವಾಲಿಗೆ ಸಿದ್ಧ ಮಾಡಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.