ಲಕ್ನೋ: ವಾರ್ಷಿಕ ಬದ್ರಿನಾಥ ಯಾತ್ರೆಗಾಗಿ ಉತ್ತರಾಖಂಡ ಸರ್ಕಾರ ಹೊಸ ಮೊಬೈಲ್ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಹರೀಶ್ ರಾವತ್ ಅವರು ‘ಶುಭ್ ಬದ್ರಿನಾಥ್ ಯಾತ್ರ’ ಎಂಬ ಹೆಸರಿನ ಈ ಆ್ಯಪ್ ಗೆ ಚಾಲನೆ ನೀಡಿದ್ದು, ಇದನ್ನು ಚಮೋಲಿ ಜಿಲ್ಲಾಡಳಿತ ಅಭಿವೃದ್ಧಿಪಡಿಸಿದೆ. ಜೋಶಿಮಾತ ಮತ್ತು ಬದ್ರಿನಾಥದ ನಡುವಣ ಯಾತ್ರೆಯ ಎಲ್ಲಾ ಮಾಹಿತಿಯನ್ನು ಭಕ್ತರಿಗೆ ಈ ಆ್ಯಪ್ ನೀಡಲಿದೆ.
ಬಳಕೆದಾರರು ಆನ್ಲೈನ್ನಲ್ಲಿದ್ದಾಗ, ಈ ಆ್ಯಪ್ ಅಟೋಮ್ಯಾಟಿಕಾಗಿ ಅವರಿರುವ ಸ್ಥಳವನ್ನು ಡೆಟೆಕ್ಟ್ ಮಾಡಿ, ಆ ಸ್ಥಳದಿಂದ ಯಾತ್ರೆಯ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡುತ್ತದೆ.
ಎಟಿಎಂ, ಪೆಟ್ರೋಲ್ ಪಂಪ್, ಹೋಟೆಲ್, ರೆಸ್ಟೋರೆಂಟ್, ನೀರು, ಶೌಚಾಲಯ, ಪಾರ್ಕಿಂಗ್, ಬಸ್ಸ್ಟ್ಯಾಂಡ್, ಟ್ಯಾಕ್ಸಿ ಸ್ಟ್ಯಾಂಡ್, ರಿಪೇರಿ ಶಾಪ್ ಹೀಗೆ ಎಲ್ಲದರ ಮಾಹಿತಿಯೂ ಬಳಕೆದಾರರಿಗೆ ಈ ಆ್ಯಪ್ನಲ್ಲಿ ಲಭ್ಯವಾಗಲಿದೆ.
ಎರ್ಮಜೆನ್ಸಿ ಮತ್ತು ಹೆಲಿಪ್ಯಾಡ್ ಸರ್ವಿಸ್ ಸೇರಿದಂತೆ ಈ ಎಲ್ಲಾ ಸೇವೆಗಳು ಗೂಗಲ್ ಮ್ಯಾಪ್ಗೆ ಲಿಂಕ್ ಆಗಿರುತ್ತದೆ, ಹವಮಾನ ವೈಪರೀತ್ಯ ಉಂಟಾದಾಗ ಅಥವಾ ಭೂಕುಸಿತ ಸಂಭವಿಸಿದಾಗ ಪರ್ಯಾಯ ಮತ್ತು ತುರ್ತು ಮಾರ್ಗಗಳ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ.
ಈ ಆ್ಯಪ್ನ್ನು ಮುಂದಿನ ದಿನಗಳಲ್ಲಿ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥಕ್ಕೂ ವಿಸ್ತರಿಸುವ ಉದ್ದೇಶ ಅಲ್ಲಿನ ಸರ್ಕಾರಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.