ನವದೆಹಲಿ: ಕತಾರ್ನಲ್ಲಿ ಜೈಲಿನಲ್ಲಿದ್ದ ಏಳು ನೌಕಾಪಡೆ ಯೋಧರನ್ನು ಇಂದು ಭಾರತಕ್ಕೆ ಮರಳಿ ಕರೆತರಲಾಗಿದೆ. ಆದರೆ ತಾವು ಭಾರತಕ್ಕೆ ಮರಳುತ್ತಿದ್ದೇವೆ ಎಂಬ ಬಗ್ಗೆ ಈ ಭಾರತೀಯರಿಗೆ ಒಂದಿಷ್ಟು ಸುಳಿವು ಕೂಡ ಇರಲಿಲ್ಲ ಎಂಬ ಅಂಶ ಈಗ ಬಹಿರಂಗವಾಗಿದೆ.
ನಿನ್ನೆ ರಾತ್ರಿ ಜೈಲರ್ಗಳು ವಸ್ತುಗಳನ್ನು ಪ್ಯಾಕ್ ಮಾಡಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಕಾಯುವಂತೆ 8 ಮಂದಿಗೆ ಕೇಳಿಕೊಂಡಿದ್ದರು . ನಂತರ ಅವರನ್ನು ಭಾರತೀಯ ರಾಯಭಾರ ಕಚೇರಿಗೆ ಕರೆದೊಯ್ಯಲಾಯಿತು ಮತ್ತು ನಂತರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅವರು ಇಂಡಿಗೋ ವಿಮಾನವನ್ನು ಏರಿ ಮಧ್ಯರಾತ್ರಿ 2 ಗಂಟೆಗೆ ದೆಹಲಿಗೆ ಬಂದಿಳಿದರು ಎಂದು ಮೂಲಗಳು ತಿಳಿಸಿವೆ.
ಗೂಢಚಾರಿಕೆ ಆರೋಪದಡಿ ಅಕ್ಟೋಬರ್ನಲ್ಲಿ ಕತಾರ್ ನ್ಯಾಯಾಲಯವು 8 ಮಂದಿ ಮಾಜಿ ನೌಕಪಡೆ ಯೋಧರಿಗೆ ಮರಣದಂಡನೆ ವಿಧಿಸಿದ್ದು, ಬಳಿಕ ಮರಣದಂಡನೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಇದೀಗ ಎಂಟು ಮಂದಿಯನ್ನೂ ಬಿಡುಗಡೆ ಮಾಡಲಾಗಿದೆ. ಎಂಟು ಭಾರತೀಯರಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಒಬ್ಬರು ಕೆಲವೊಂದು ದಾಖಲೆಗಳ ಪ್ರಕ್ರಿಯೆಯಲ್ಲಿದ್ದು, ಶೀಘ್ರವೇ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ 8 ಮಂದಿಯ ಬಿಡುಗಡೆಯು ಭಾರತದ ರಾಜತಾಂತ್ರಿಕ ಪ್ರಯತ್ನಕ್ಕೆ ದೊರೆತ ಅತಿದೊಡ್ಡ ಪ್ರತಿಫಲ ಎಂದೇ ಬಣ್ಣಿಸಲಾಗಿದೆ.
ಇಂದು ಹಿಂದಿರುಗಿದ ಮಾಜಿ ಯೋಧರೆಂದರೆ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್ (ನಿವೃತ್ತ), ಕ್ಯಾಪ್ಟನ್ ಸೌರಭ್ ವಸಿಷ್ಟ್ (ನಿವೃತ್ತ), ಕಮಾಂಡರ್ ಪೂರ್ಣೇಂದು ತಿವಾರಿ (ನಿವೃತ್ತ), ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ (ನಿವೃತ್ತ), ಕಮಾಂಡರ್ ಸುಗುಣಾಕರ್ ಪಕಲಾ (ನಿವೃತ್ತ), ಕಮಾಂಡರ್ ಸಂಜೀವ್ ಗುಪ್ತಾ (ನಿವೃತ್ತ), ಕಮಾಂಡರ್ ಅಮಿತ್ ನಾಗ್ಪಾಲ್ (ನಿವೃತ್ತ) ಮತ್ತು ನಾವಿಕ ರಾಗೇಶ್ (ನಿವೃತ್ತ). ಎಂಟು ಯೋಧರನ್ನು 2022 ರಲ್ಲಿ ಕತಾರ್ನಲ್ಲಿ ಬಂಧಿಸಲಾಯಿತು ಮತ್ತು ಅಲ್ಲಿಂದ ಅವರು ಜೈಲಿನಲ್ಲೇ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.