ನನವದೆಹಲಿ: ನೂತನ ಸಂಸತ್ತಿನ ಭವನವನ್ನು ಮೇ.28ರಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಸಜ್ಜಾಗಿದ್ದಾರೆ. ಇಡೀ ದೇಶವೇ ಈ ಐತಿಹಾಸಿಕ ಕ್ಷಣವನ್ನು ಎದುರು ನೋಡುತ್ತಿದೆ. ಆದರೆ ಮೊಸರಿನಲ್ಲೂ ಕಲ್ಲು ಹುಡುಕುವ ಜಾಯಮಾನದ ವಿರೋಧ ಪಕ್ಷಗಳು ಈ ಐತಿಹಾಸಿಕ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಹೇಳಿವೆ.
ರಾಷ್ಟ್ರಪತಿಗಳ ಬದಲು ಪ್ರಧಾನಿಗಳು ಸಂಸತ್ತನ್ನು ಉದ್ಘಾಟಿಸುತ್ತಿರುವ ಬಗ್ಗೆ ಇವುಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ಪ್ರತಿಪಕ್ಷಗಳ ಈ ಧೋರಣೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಖಂಡಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, ಕಳೆದ 9 ವರ್ಷಗಳಲ್ಲಿ 5 ಬಿಜೆಪಿಯೇತರ ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳು ವಿಧಾನಸಭಾ ಕಟ್ಟಡಕ್ಕೆ ಶಿಲನ್ಯಾಸ ಹಾಕಿವೆ ಅಥವಾ ಉದ್ಘಾಟನೆ ಮಾಡಿವೆ. ಆದರೆ ಇವೆಲ್ಲವನ್ನು ಅಲ್ಲಿನ ಮುಖ್ಯಮಂತ್ರಿಗಳೇ ಅಥವಾ ಪಕ್ಷದ ಅಧ್ಯಕ್ಷರುಗಳು ಮಾಡಿದ್ದಾರೆ ಹೊರತು ಯಾವುದೇ ಉದ್ಘಾಟನಾ ಕಾರ್ಯವನ್ನು ಅಲ್ಲಿನ ರಾಜ್ಯಪಾಲರುಗಳು ಮಾಡಿಲ್ಲ ಎಂದಿದ್ದಾರೆ.
2018ರಲ್ಲಿ ಜಾರ್ಖಂಡ್ ಮತ್ತು ಅಸ್ಸಾಂ ವಿಧಾನಸಭಾ ಕಟ್ಟಡಗಳಿಗೆ ಯುಪಿಎ ಮುಖ್ಯಮಂತ್ರಿಗಳು ಶಿಲನ್ಯಾಸ ನೆರವೇರಿಸಿದರು. ಅಲ್ಲಿಗೆ ರಾಜ್ಯಪಾಲರಿಗೆ ಆಹ್ವಾನ ನೀಡಲಾಗಿರಲಿಲ್ಲ. 2018ರಲ್ಲಿ ಆಂಧ್ರ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿದರು, ರಾಜ್ಯಪಾಲರಿಗೆ ಆಹ್ವಾನ ಇರಲಿಲ್ಲ. 2020ರಲ್ಲಿ ಸೋನಿಯಾ ಗಾಂಧಿ ಅವರು ಛತ್ತೀಸ್ಗಡ ವಿಧಾನಸಭೆಗೆ ಶಿಲಾನ್ಯಾಸ ನೆರವೇರಿಸಿದರು. ರಾಜ್ಯಪಾಲರಿಗೆ ಆಹ್ವಾನ ಇರಲಿಲ್ಲ. 2023ರಲ್ಲಿ ತೆಲಂಗಾಣ ವಿಧಾನಸಭೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ರಾಜಪಾಲರನ್ನು ಆಮಂತ್ರಿಸಲಾಗಿರಲಿಲ್ಲ ಎಂದು ಹಿಮಂತ್ ಬಿಸ್ವಾ ಶರ್ಮಾ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
In the last 9 years – 5 non-BJP / Opposition state governments either laid foundation stones or inaugurated a new Legislative Assembly building .
All were done by either the Chief Minister or the Party President. In not a single instance was the Governor or President invited. pic.twitter.com/LjP9zjlLGg
— Himanta Biswa Sarma (@himantabiswa) May 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.