ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ನಿನ್ನೆ ಮತ್ತು ಇಂದು ಬಿರುಸಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಉಡುಪಿ ಶ್ರೀ ಕೃಷ್ಣ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಅವರು ಎಂಜಿಎಂ ಕಾಲೇಜು ಮೈದಾನದ ಆವರಣದಲ್ಲಿ ಜಿಲ್ಲಾ ಮಟ್ಟದ ಬೂತ್ ಸಮಿತಿ ಸಮಾವೇಶದಲ್ಲಿ ಭಾಗಿಯಾದರು. ಬಳಿಕ ಬೈಂದೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಚಿಕ್ಕಮಗಳೂರಿನಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗಿಯಾದರು ಮತ್ತು ರಾತ್ರಿ ಶೃಂಗೇರಿ ಶ್ರೀ ಶಾರದಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಇಂದು ಅವರು ಚಿಕ್ಕಮಗಳೂರಿನಲ್ಲಿ ಬೈಕ್ ರ್ಯಾಲಿಯಲ್ಲಿ ಭಾಗಿಯಾದರು ಮತ್ತು ಚಿಂತಕರು ಹಾಕೂ ಪ್ರಬುದ್ಧರ ಸಭೆ ನಡೆಸಿದರು ಬಳಿಕ ಹಾಸನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದರು. ಇಂದು ಸಂಜೆ ಚೆನ್ನಕೇಶವ ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. ಅಲ್ಲದೇ ಹಾಸನದಲ್ಲಿ ಜಿಲ್ಲಾ ಬೂತ್ ಸಮಿತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ನಡ್ಡಾ, “ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ವಿಭಿನ್ನ ರಾಷ್ಟ್ರವಾಗಿ ಹೊರಹೊಮ್ಮಿದೆ. 9 ವರ್ಷಗಳ ಹಿಂದೆ ದೇಶದ ಚಿತ್ರಣವೇ ಬೇರೆಯಿತ್ತು, ನಾವು ನೀತಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೆವು. ಭಾರತ ಅತಿ ಭ್ರಷ್ಟ ದೇಶಗಳಲ್ಲಿ ಒಂದಾಗಿತ್ತು. ನಾವು ಅಂತಾರಾಷ್ಟ್ರೀಯ ಧ್ವನಿ ಹೊಂದಿರಲಿಲ್ಲ. ಆದರೆ ಈಗ ಭಾರತ ಅಂತಾರಾಷ್ಟ್ರೀಯ ಧ್ವನಿ ಹೊಂದಿದೆ, ನಿರ್ಣಾಯಕ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ದೇಶವಾಗಿ, ಭ್ರಷ್ಠಾಚಾರ ಮುಕ್ತ ದೇಶವಾಗಿ ಹೊರಹೊಮ್ಮಿದೆ” ಎಂದರು.
ಅಲ್ಲದೇ, ಕೊರೋನಾ ಬಳಿಕ, ಉಕ್ರೇಕ್-ರಷ್ಯಾ ಯುದ್ಧದ ಬಳಿಕ ವಿಶ್ವ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಭಾರತದ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ಭಾರತದ ಜಿಡಿಪಿ ಪ್ರಗತಿ 7.4%ನಲ್ಲಿದೆ. ಯುಎಸ್ ಜಿಡಿಪಿ 2.3% ರಲ್ಲಿದೆ , ಚೀನಾದ ಜಿಡಿಪಿ 3.3% ರಲ್ಲಿದೆ. ಜಗತ್ತಿನ ಬಲಿಷ್ಠರನ್ನು ಹಿಂದಿಕ್ಕಿದ್ದೇವೆ. ಕೊರೋನಾ ಸಂದರ್ಭದಲ್ಲಿ ಮೋದಿ ತೆಗೆದುಕೊಂಡ ಕಠಿಣ ಕ್ರಮಗಳಿಂದ ಇದು ಸಾಧ್ಯವಾಯಿತು. ದೊಡ್ಡ ಆರ್ಥಿಕ ಪ್ಯಾಕೇಜ್ ನೀಡಿದರು. ಎಂಎಸ್ಎಂಇ, ಕೃಷಿ ವಲಯಕ್ಕೆ ಹಣಕಾಸು ಬೆಂಬಲ ನೀಡಿದರು. ಬಡವರ ಬೆಂಬಲಕ್ಕಾಗಿ ಗರೀಬ್ ಕಲ್ಯಾಣ ಅನ್ನ ಯೋಜನೆ ಜಾರಿಗೊಳಿಸಿದರು. ಈ ಮೂಲಕ ಯಾರೂ ಹಸಿವಿನಿಂದ ನರಳಬಾರದು ಎಂಬುದನ್ನು ಖಚಿತಪಡಿಸಿದರು. ಐಎಂಎಫ್ ವರದಿ ಪ್ರಕಾರ ಇಂದು ಭಾರತದಲ್ಲಿ ತೀವ್ರ ಬಡತನ ಶೇ.1ಕ್ಕಿಂತ ಕಡಿಮೆಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.