News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದೇಶಿ ಇ ಕಾಮರ್ಸ್ ಕಂಪೆನಿಗಳ ಮೇಲೆ ನಿಯಂತ್ರಣಕ್ಕೆ ಸ್ವದೇಶಿ ಜಾಗರಣ ಮಂಚ್ ಆಗ್ರಹ

ಬೆಂಗಳೂರು: ವಿದೇಶಿ ಇ ಕಾಮರ್ಸ್ ಕಂಪೆನಿಗಳ ಮೇಲೆ ನಿಯಂತ್ರಣಕ್ಕೆ ಸ್ವದೇಶಿ ಜಾಗರಣ ಮಂಚ್ ಆಗ್ರಹಿಸುತ್ತಿದೆ ಎಂದು ಎಂದು ಖ್ಯಾತ ಅರ್ಥಶಾಸ್ತ್ರಜ್ಞರು ಹಾಗೂ ಪರಿಸರ ತಜ್ಞರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ದಾಸರಹಳ್ಳಿಯ ಬಾಗಲಕುಂಟೆಯ ಎಂ.ಇ.ಐ. ಲೇ ಔಟ್‌ನ ಎಂ.ಇ.ಐ. ಆಟದ ಮೈದಾನದಲ್ಲಿ ’ನಂದಿನಿ’ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳ ಕಾರ್ಯಕ್ರಮದಲ್ಲಿ ನಿನ್ನೆ ಸಂಜೆ ಅವರು ಇ ಕಾಮರ್ಸ್ ಕುರಿತು ಪ್ರಮುಖ ಭಾಷಣ ಮಾಡಿದರು. ಇ ಕಾಮರ್ಸ್‌ನಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

ಬೆಳಿಗ್ಗೆ ನಡೆದ ಆಯುರ್ವೇದ ಶಿಬಿರದಲ್ಲಿ ಮಾತನಾಡಿದ ಖ್ಯಾತ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ.ಚಂದ್ರಶೇಖರ್ ಅವರು ಆಯುರ್ವೇದ ಪದ್ಧತಿಯು ಅತ್ಯಂತ ಪುರಾತನವಾದುದು ಎಂದು ವಿವರಿಸಿದರು.

ಮಧ್ಯಾಹ್ನ ತಾರಸಿ ತೋಟ ಕುರಿತ ಕಾರ್ಯಾಗಾರದಲ್ಲಿ ಇನಿಷಿಯೇಟಿವ್ಸ್ ಫಾರ್ ಡೆವಲಪ್‌ಮೆಂಟ್ ಫೌಂಡೇಶನ್ ಹಾಗೂ ಟ್ರಸ್ಟಿ, ಗಾರ್ಡನ್ ಸಿಟಿ ಫಾರ್ಮರ್ಸ್‌ನ ಕಾರ್ಯಕ್ರಮ ಸಂಯೋಜಕರಾದ ಶ್ರೀ ರಾಜೇಂದ್ರ ಹೆಗಡೆ ಅವರು ಮಾತನಾಡಿ, ಶೇ 90ರಷ್ಟು ಹಸಿ ಕಸವನ್ನು ಮನೆಯಲ್ಲಿ ಸುಲಭವಾಗಿ ಗೊಬ್ಬರವಾಗಿ ಮಾಡಲು ಸಾಧ್ಯ ಎಂದು ತಿಳಿಸಿದರು.

ನಗರಪ್ರದೇಶದಲ್ಲಿ ತಾರಸಿ ತೋಟದ ನಿರ್ವಹಣೆ ಕುರಿತಂತೆ ಅವರು ಮಾರ್ಗದರ್ಶನ ನೀಡಿದರು.

ಸಂಜೆ ರಾಗ್ ರಂಗ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ಪಂ.ಶ್ರೀ ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿ, ಕಿರಣ್ ಗೋಡ್ಖಿಂಡಿ ಅವರ ಬಾಂಸುರಿ ಜುಗಲ್‌ಬಂದಿಯು ಜನಮನವನ್ನು ಆಕರ್ಷಿಸಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top