ನವದೆಹಲಿ: ವಸಾಹತುಶಾಹಿ ಯುಗದಲ್ಲಿ ಪಿತೂರಿಯ ಭಾಗವಾಗಿ ಬರೆಯಲ್ಪಟ್ಟ ಇತಿಹಾಸದ ಪುಟಗಳಲ್ಲಿ ಕಳೆದುಹೋಗಿರುವ ವೈವಿಧ್ಯಮಯ ಪರಂಪರೆಯನ್ನು ಇಂದು ಆಚರಿಸುವ ಮೂಲಕ ಭಾರತವು ತನ್ನ ಹಿಂದಿನ ತಪ್ಪುಗಳನ್ನು ಸರಿಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಲಚಿತ್ ಬರ್ಫುಕನ್ ಅವರ 400 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಇತಿಹಾಸವೆಂದರೆ ಅದು ಕೇವಲ ಗುಲಾಮಗಿರಿಯ ಇತಿಹಾಸವಲ್ಲ, ವೀರ ಯೋಧರ ಬಗೆಗಿನ ಇತಿಹಾಸವೂ ಇದೆ ಎಂದು ಅವರು ಹೇಳಿದ್ದಾರೆ.
“ಭಾರತದ ಇತಿಹಾಸವು ಯೋಧರ ಇತಿಹಾಸ, ವಿಜಯದ ಇತಿಹಾಸ, ತ್ಯಾಗದ ಇತಿಹಾಸ, ನಿಸ್ವಾರ್ಥತೆ ಮತ್ತು ಶೌರ್ಯದ ಇತಿಹಾಸ ಆದರೆ ದುರದೃಷ್ಟವಶಾತ್ ಸ್ವಾತಂತ್ರ್ಯದ ನಂತರವೂ ವಸಾಹತುಶಾಹಿ ಯುಗದಲ್ಲಿ ಪಿತೂರಿಯ ಭಾಗವಾಗಿ ಬರೆಯಲಾದ ಇತಿಹಾಸವನ್ನೇ ಕಲಿಸಲಾಯಿತು” ಎಂದು ಪ್ರಧಾನಿ ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಗುಲಾಮಗಿರಿಯ ಕಾರ್ಯಸೂಚಿಯನ್ನು ಬದಲಾಯಿಸುವ ಅಗತ್ಯವಿತ್ತು ಆದರೆ ಅದು ಸಂಭವಿಸಲಿಲ್ಲ. ದೇಶದ ಮೂಲೆಮೂಲೆಯಲ್ಲಿ ವೀರ ಪುತ್ರರು ಮತ್ತು ಪುತ್ರಿಯರು ದಮನಕಾರಿಗಳ ವಿರುದ್ಧ ಹೋರಾಡಿದರು ಆದರೆ ಈ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಯಿತು ಎಂದರು.
“ಇಂದು, ಭಾರತವು ವಸಾಹತುಶಾಹಿಯ ಸಂಕೋಲೆಗಳನ್ನು ಮುರಿದಿದೆ ಮತ್ತು ನಮ್ಮ ಪರಂಪರೆಯನ್ನು ಆಚರಿಸುತ್ತಾ ಮತ್ತು ನಮ್ಮ ವೀರರನ್ನು ಹೆಮ್ಮೆಯಿಂದ ಸ್ಮರಿಸುತ್ತಾ ಮುನ್ನಡೆಯುತ್ತಿದೆ” ಎಂದು ಅವರು ಹೇಳಿದರು.
For centuries, it was attempted to tell us we're people who always get looted, beaten & lose. India's history is not just about colonialism, it's a history of warriors. India's history is about displaying valour against oppressors, about victory, sacrifice & great tradition: PM pic.twitter.com/bauWmqcvBp
— ANI (@ANI) November 25, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.