ಇಂಫಾಲ: ಎರಡು ನಿಷೇಧಿತ ಸಂಘಟನೆಗಳಿಗೆ ಸೇರಿದ 13 ಬಂಡುಕೋರರು ಗುರುವಾರ ಇಂಫಾಲದಲ್ಲಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಮುಂದೆ ತಮ್ಮ ಬಂದೂಕುಗಳೊಂದಿಗೆ ಶರಣಾಗಿದ್ದಾರೆ.
ಶರಣಾದ ಬಂಡುಕೋರರಲ್ಲಿ 12 ಮಂದಿ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ-ಪೀಪಲ್ಸ್ ವಾರ್ ಗ್ರೂಪ್ (ಕೆಸಿಪಿ-ಪಿಡಬ್ಲ್ಯೂಜಿ) ಮತ್ತು ಒಬ್ಬರು ಕಂಗ್ಲೇ ಯವೋಲ್ ಕನ್ಬ ಲುಪ್ (ಕೆವೈಕೆಎಲ್)ಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.
ಇಂಫಾಲದ 1ನೇ ಮಣಿಪುರ ರೈಫಲ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಶರಣಾಗತಿ ಸಮಾರಂಭದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಎಲ್ಲಾ ಬಂಡುಕೋರ ಸಂಘಟನೆಗಳನ್ನು ಸಂಧಾನಕ್ಕೆ ಬರುವಂತೆ ಒತ್ತಾಯಿಸಿದರು.
“ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಮಣಿಪುರದಲ್ಲಿ ಶಾಂತಿ ನೆಲೆಸಿದೆ ಮತ್ತು ವಿವಿಧ ಸಂಘಟನೆಗಳ ಉಗ್ರಗಾಮಿಗಳು ಮುಖ್ಯವಾಹಿನಿಗೆ ಮರಳುತ್ತಿದ್ದಾರೆ” ಎಂದಿದ್ದಾರೆ.
“ಶಾಂತಿ ಮಾತುಕತೆಗೆ ಬರುವಂತೆ ನಾನು ಎಲ್ಲ ಬಂಡಾಯ ಸಂಘಟನೆಗಳಿಗೆ ಮನವಿ ಮಾಡುತ್ತೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದಂತೆ, ಶರಣಾದ ಮೇಲೆ ಒಂದು ಗುಂಡು ಕೂಡ ಹಾರಿಸುವುದಿಲ್ಲ ಮತ್ತು ಎಫ್ಐಆರ್ ಕೂಡ ದಾಖಲಿಸುವುದಿಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.