ಲಕ್ನೋ: ಉತ್ತರಪ್ರದೇಶ ಸರ್ಕಾರವು ರೈತರಿಗೆ ಆಧಾರ್ ಸಂಖ್ಯೆಯನ್ನು ಹೋಲುವ ವಿಶಿಷ್ಟವಾದ ಫಾರ್ಮ್ ಐಡಿಯನ್ನು ಒದಗಿಸಲಿದೆ. ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲು ಆಧಾರ್ನೊಂದಿಗೆ ಈ ಐಡಿಯನ್ನು ಲಿಂಕ್ ಮಾಡಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಆಧಾರ್ ಪರಿಶೀಲನೆಯನ್ನು ಬಳಸಲಾಗುತ್ತದೆ ಎಂದು ಯುಪಿ ಸರ್ಕಾರಿ ಮೂಲಗಳು ತಿಳಿಸಿವೆ.
ಆಧಾರ್ ಬಳಕೆಯನ್ನು ಹೆಚ್ಚು ಸರಳಗೊಳಿಸಲು ಕೈಗೊಂಡ ಇತ್ತೀಚಿನ ಉಪಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದ ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಆಧಾರ್ ಸಹಾಯದಿಂದ ಯುಪಿ ಸರ್ಕಾರವು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಗರಿಷ್ಠ ಸಂಖ್ಯೆಯ ಜನರಿಗೆ ನೀಡಿದೆ ಎಂದು ಹೇಳಿದ್ದಾರೆ.
ಆಧಾರ್ ಪರಿಶೀಲನೆಯ ಮೂಲಕ ಸರ್ಕಾರವು ಸುಮಾರು 8400 ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ಅವರು ಹೇಳಿದರು. ಆಧಾರ್ ಕಾರ್ಡ್ ಪರಿಶೀಲನೆಯ ಸಹಾಯದಿಂದ ಸುಮಾರು 1 ಕೋಟಿ 92 ಲಕ್ಷ ಶಾಲಾ ಮಕ್ಕಳು ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಶೀಘ್ರದಲ್ಲೇ ಕುಟುಂಬ ಐಡಿಯನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಮಿಶ್ರಾ ಹೇಳಿದರು. ಈವರೆಗೆ ಯಾವುದೇ ರೀತಿಯ ಸವಲತ್ತುಗಳನ್ನು ಪಡೆಯದ ಕುಟುಂಬಗಳನ್ನು ಸರ್ಕಾರ ಈ ಯೋಜನೆಯ ವ್ಯಾಪ್ತಿಗೆ ತರಲಿದೆ ಎಂದು ಹೇಳಿದರು.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌರಭ್ ಗಾರ್ಗ್ ಮಾತನಾಡಿ, ಆಧಾರ್ನ ವಿಶ್ವಾಸಾರ್ಹತೆಯ ಬಗ್ಗೆ ವಿಶ್ವಾದ್ಯಂತ ಚರ್ಚಿಸಲಾಗುತ್ತಿದೆ ಮತ್ತು ಅನೇಕ ಆಫ್ರಿಕನ್ ದೇಶಗಳು ಆಧಾರ್ ವ್ಯವಸ್ಥೆಯನ್ನು ಜಾರಿಗೆ ತರಲು ಬಯಸುತ್ತಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.