ಬೆಂಗಳೂರು: ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ಉತ್ತರ ಪ್ರದೇಶದ ಕನ್ನೌಜ್ನ ಮೇಡ್ ಇನ್ ಇಂಡಿಯಾ ಸುಗಂಧ ದ್ರವ್ಯವನ್ನು ನ್ಯೂಯಾರ್ಕ್ನಲ್ಲಿ ಬಿಡುಗಡೆ ಮಾಡಲಾಯಿತು.
‘ವಿಕಾಸ್ ಖನ್ನಾ ಬೈ ಜಿಘ್ರಾನಾ’ ಸುಗಂಧ ದ್ರವ್ಯವನ್ನು ನ್ಯೂಯಾರ್ಕ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ರಣಧೀರ್ ಜೈಸ್ವಾಲ್ ಅವರು ಅನಾವರಣಗೊಳಿಸಿದರು. ಸುಗಂಧ ದ್ರವ್ಯ ತಯಾರಕ ಜಿಘ್ರಾನಾ ಸಂಸ್ಥೆ ಭಾರತೀಯ ಸಾಂಸ್ಕೃತಿಕ ಐಕಾನ್ ಮತ್ತು ಉದ್ಯಮಿ ವಿಕಾಸ್ ಖನ್ನಾ ಅವರ ಜೊತೆ ಸೇರಿ ಇದನ್ನು ತಯಾರಿಸಿದೆ.
“ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ನಾವು ಆಚರಿಸುತ್ತಿರುವ ಸಮಯದಲ್ಲಿ ನಾವು ಕನ್ನೌಜ್ನಲ್ಲಿ ತಯಾರಾದ ಭಾರತೀಯ ಸುಗಂಧ ದ್ರವ್ಯವನ್ನು ನ್ಯೂಯಾರ್ಕ್ನಲ್ಲಿ ಹೊಂದುತ್ತಿರುವುದು ಇದು ಬಹುಶಃ ಮೊದಲ ಬಾರಿಗೆ” ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಜಿಘ್ರಾನಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವಪ್ನಿಲ್ ಪಾಠಕ್ ಶರ್ಮಾ ಮಾತನಾಡಿ, “ಇಲ್ಲಿ ನ್ಯೂಯಾರ್ಕ್ನಲ್ಲಿ ಉತ್ಪನ್ನವನ್ನು ಪ್ರಾರಂಭಿಸುತ್ತಿರುವುದು ಒಂದು ಗೌರವ. ಸಣ್ಣ ಪಟ್ಟಣದಿಂದ ಬಂದಿರುವ ನಮ್ಮ ಕನಸು ನನಸಾಗಿದೆ. ಇಂತಹ ಜಾಗತಿಕ ವೇದಿಕೆಯಲ್ಲಿ ನನ್ನ ನಗರವನ್ನು ಪ್ರಸ್ತುತಪಡಿಸುತ್ತಿರುವುದು ಸಂತೋಷವಾಗಿದೆ” ಎಂದಿದ್ದಾರೆ.
“ನಮ್ಮ ನಾಗರಿಕತೆಯ ತೊಟ್ಟಿಲು ಪವಿತ್ರ ಗಂಗಾ ನದಿಯ ಸಮೀಪದಲ್ಲಿರುವ ಭಾರತದ ಸುಗಂಧ ದ್ರವ್ಯದ ರಾಜಧಾನಿ ಕನೌಜ್ನಿಂದ ನಾವು ಬಂದವರು, ಈ ಹೊಸ ಉತ್ಪನ್ನವು ಇನ್ಕ್ರೆಡಿಬಲ್ ಇಂಡಿಯಾದ ಸಾರವನ್ನು ಸೆರೆಹಿಡಿಯುವ ನಮ್ಮ ವಿನಮ್ರ ಪ್ರಯತ್ನವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.