ನವದೆಹಲಿ: ಸೃಜನಾತ್ಮಕ ಅಭಿವ್ಯಕ್ತಿಯ ಮೂಲಕ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಜನರನ್ನು ಹೆಚ್ಚು ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಚುನಾವಣಾ ಆಯೋಗವು ʼನನ್ನ ಮತ ನನ್ನ ಭವಿಷ್ಯ – ಒಂದು ಮತದ ಶಕ್ತಿʼ ಎಂಬ ಸ್ಪರ್ಧೆ ಆಯೋಜನೆ ಮಾಡಿದ್ದು, ಜನವರಿ 15ರಿಂದಲೇ ಇದು ಆರಂಭಗೊಂಡಿದೆ.
ಸ್ಪರ್ಧೆಯು ರಸಪ್ರಶ್ನೆ ಸ್ಪರ್ಧೆ, ಘೋಷವಾಕ್ಯ ಸ್ಪರ್ಧೆ, ಹಾಡಿನ ಸ್ಪರ್ಧೆ, ವೀಡಿಯೊ ತಯಾರಿಕೆ ಸ್ಪರ್ಧೆ ಮತ್ತು ಪೋಸ್ಟರ್ ವಿನ್ಯಾಸ ಸ್ಪರ್ಧೆಯನ್ನು ಒಳಗೊಂಡಿರಲಿದೆ. ಇದು ಎಲ್ಲಾ ವಯೋಮಾನದವರಿಗೆ ಮುಕ್ತವಾಗಿದೆ.
ಸ್ಪರ್ಧೆಯ ನಮೂದುಗಳನ್ನು ಮಾರ್ಚ್ 15, 2022 ರವರೆಗೆ ಕಳುಹಿಸಬಹುದು. ವಿಜೇತರಿಗೆ ಸೂಕ್ತವಾಗಿ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
https://voterawarenesscontest.inನಲ್ಲಿ ನಮೂದುಗಳನ್ನು ಸಲ್ಲಿಕೆ ಮಾಡಬಹುದು.
ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ 'ನನ್ನ ಮತ ನನ್ನ ಭವಿಷ್ಯ '
ಈ ಸ್ಪರ್ಧೆ ಎಲ್ಲರಿಗೂ ಮುಕ್ತವಾಗಿದ್ದು, ಹಾಡು,ಬರಹ, ಸೃಷ್ಟಿ, ಚಿತ್ರಕಲೆ ಮತ್ತು ಇತ್ಯಾದಿ,
ನಿಮ್ಮ ಸೃಜನಶೀಲತೆ ಜೊತೆ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೊಡುಗೆ ನೀಡಿ. https://t.co/UApiviHleo
ಕೊನೆಯ ದಿನಾಂಕ: 15 ಮಾರ್ಚ್ 2022#PowerofOneVote https://t.co/ag1BM5Bpva pic.twitter.com/TttuEVQJXc— PIB in Karnataka (@PIBBengaluru) February 14, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.