ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ತಮ್ಮ ಸರ್ಕಾರವು 1,000 ಕುಟುಂಬಗಳು 77,000 ಎಕರೆ ಭೂಮಿಯನ್ನು ಕಬಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
“ನಾವು ಭೂಮಿ ಅತಿಕ್ರಮಣ ಮಾಡಿದವರನ್ನು ಹೊರಹಾಕಿದ್ದೇವೆ. ಯಾಕೆಂದರೆ ಅದು 77,000 ಎಕರೆ ಭೂಮಿ ಮತ್ತು 1,000 ಕುಟುಂಬಗಳು ಆ 77,000 ಎಕರೆ ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಭೂಮಿಯ ವಿತರಣೆ ಸಮಂಜಸವಾಗಿ ಇರಬೇಕು” ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ಸಂದರ್ಭದಲ್ಲಿ ಶರ್ಮಾ ಹೇಳಿದ್ದಾರೆ.
“ನಮ್ಮ ಭೂ ನೀತಿಯ ಪ್ರಕಾರ ಯಾರೂ 2 ಎಕರೆಗಿಂತ ಹೆಚ್ಚು ಭೂಮಿಯನ್ನು ಆಕ್ರಮಿಸಿಕೊಳ್ಳುವಂತಿಲ್ಲ” ಎಂದು ಅವರು ಹೇಳಿದ್ದಾರೆ.
“ನಾವು ಭೂಮಿ ಹೊಂದಿರದ ಜನರಿಗೆ ಭೂಮಿಯನ್ನು ನೀಡಬೇಕು. ನಾವು ಸರ್ಕಾರಿ ಯೋಜನೆಗಳನ್ನು ಮಾಡಬೇಕು. ಆದ್ದರಿಂದ ಜನರು ನಮ್ಮ ಅರಣ್ಮ ಭೂಮಿಯನ್ನು ಅತಿಕ್ರಮಿಸಿದರೆ ನಾವು ಅವರನ್ನು ಹೊರಹಾಕಲೇ ಬೇಕಾಗುತ್ತದೆ” ಎಂದು ಶರ್ಮಾ ಹೇಳಿದ್ದಾರೆ.
ಅತಿಕ್ರಮಣ ತೆರವು ನಿರಂತರ ಪ್ರಕ್ರಿಯೆಯಾಗಿದೆ ಆದರೆ ರಾಜ್ಯದಲ್ಲಿ ನಡೆದ ಘಟನೆಯಿಂದಾಗಿ ಈ ಸಮಸ್ಯೆ ರಾಷ್ಟ್ರೀಯ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ, ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸಿಪಾಜ್ಹಾರ್ನಲ್ಲಿ ನಡೆಸಲಾದ ತೆರವು ಕಾರ್ಯಾಚರಣೆ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ, ಇದು ಕನಿಷ್ಠ ಇಬ್ಬರ ಸಾವಿಗೆ ಕಾರಣವಾಯಿತು.
“ಯಾವುದೇ ಸಮುದಾಯವಾರು ರಾಜಕೀಯ ಇಲ್ಲ, ಇದರಲ್ಲಿ ಯಾವುದೇ ಕೋಮುವಾದ ಇಲ್ಲ. ಸ್ಥಳೀಯ ಅಸ್ಸಾಮಿ ಜನರನ್ನು ಕೂಡ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದಾಗ ಹೊರಹಾಕಲಾಗಿದೆ” ಎಂದು ಅವರು ಹೇಳಿದ್ದಾರೆ.
ಬುಡಕಟ್ಟು ಜನರಿಗಾಗಿ ಅಳದ ಎಡಪಂಥೀಯರು ಅಕ್ರಮ ವಲಸಿಗರನ್ನು ಹೊರಹಾಕಿದ ಸಂದರ್ಭ ಕಣ್ಣೀರು ಸುರಿಸುತ್ತಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.