Tuesday, August 25th, 2015
News13

ಈ ಬಗ್ಗೆ ಕೊಂಕಣಿ ಕಲಾವಿದರಿಗೆ ಮಾಹಿತಿ ನೀಡಲು ಕೊಂಕಣಿ ಅಕಾಡೆಮಿಯಿಂದ ಭಾನುವಾರ ಆ.30 , ಬೆಳಿಗ್ಗೆ 10-00 ಗಂಟೆಗೆ ಡಾನ್ ಬಾಸ್ಕೊ ಸಭಾಂಗಣ, ಮಂಗಳೂರುನಲ್ಲಿ ಕೊಂಕಣಿ ನಾಟಕ ಸಭೆಯ ಸಹಕಾರದಲ್ಲಿ ಸಭೆ ಕರೆಯಲಾಗಿದೆ. ನಾಟಕ, ಸಂಗೀತ, ಗಾಯನ, ಯಕ್ಷಗಾನ, ಜಾನಪದ ಇತ್ಯಾದಿ ಪ್ರದರ್ಶನ ಕಲೆಗಳಲ್ಲಿ ಇರುವ ಹಿರಿಯ ಮತ್ತು ಯುವ ಕಲಾವಿದರ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಭೆಗೆ ಬರುವಾಗ 2 ಫೊಟೊ ಹಾಗೂ ಚುನಾವಣಾ ಆಯೋಗದ ಗುರುತು ಚೀಟಿ, ಆಧಾರ್ ಕಾರ್ಡ್, ಪಾಸ್ ಫೊರ್ಟ್, ವಾಹನ ಚಾಲನಾ ಪರವಾನಿಗೆ ಇತ್ಯಾದಿ (ಯಾವುದಾದಾರೂ ಒಂದು) ಗುರುತು ಪತ್ರದ ಪ್ರತಿ ತರಬೇಕು.
ಕೊಂಕಣಿಯ ಎಲ್ಲಾ ಸಮುದಾಯದ ಕಲಾವಿದರು ಇದರ ಪ್ರಯೋಜನ ಪಡೆಯಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಕಲಾವಿದ ಸಂಚಾಲಕ ಡೊಲ್ಲಾ, ಮಂಗಳೂರು (98452 09323) ಅಥವಾ ಅಕಾಡೆಮಿ ಕಚೇರಿಯನ್ನು (0824 2453167) ಸಂಪರ್ಕಿಸಲು ವಿನಂತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.