ಬೆಂಗಳೂರು: ನಗರದ ಕೆ ಆರ್ ಪುರ ವಲಯದಲ್ಲಿ ರೂಪಿಸಲಾದ ಕಾಡುಗೋಡಿ ವೃಕ್ಷೋದ್ಯಾನವನ್ನು ಸಿಎಂ ಯಡಿಯೂರಪ್ಪ ಅವರು ಬುಧವಾರ ಉದ್ಘಾಟಿಸಿದ್ದಾರೆ.
ಸುಮಾರು 22 ಎಕರೆ ವಿಸ್ತೀರ್ಣದಲ್ಲಿ ಈ ವೃಕ್ಷೋದ್ಯಾನ ನಿರ್ಮಾಣವಾಗಿದ್ದು, ಇದು ಮಿನಿ ಲಾಲ್ಬಾಗ್ನಂತಿದೆ. ಇಲ್ಲಿ ಚಿಣ್ಣರ ಉದ್ಯಾನ, ವಾಯುವಿಹಾರ, ದೈಹಿಕ ಕಸರತ್ತಿಗೆ ಮಿನಿ ಜಿಮ್ ವ್ಯವಸ್ಥೆ ಇದೆ. ಹಾಗೆಯೇ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳನ್ನು ಸಹ ಈ ವೃಕ್ಷೋದ್ಯಾನ ಒಳಗೊಂಡಿದೆ.
ಬೆಂಗಳೂರು ನಾಗರಿಕರಿಗೆ ವಿರಾಮದ ಸಮಯವನ್ನು ಕಳೆಯಲು ಈ ವೃಕ್ಷೋದ್ಯಾನ ಸೂಕ್ತವಾಗಿದೆ. ಈ ಉದ್ಯಾನದಲ್ಲಿ ಕಾಣಸಿಗುವ ಪ್ರಾಣಿ ಪಕ್ಷಿಗಳು, ಕೀಟಗಳಿಗೆ ಸಂಬಂಧಿಸಿದಂತೆ ಅಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ಈ ಉದ್ಯಾನದಲ್ಲಿ ಹಲವು ವಿಧದ ಮರಗಳು, ಗಿಡಗಳನ್ನು ನೆಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.