ನವದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ದೇಶಾದ್ಯಂತ ಸ್ಥಾಪಿಸಲಾಗಿರುವ 201 ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ಜಿ) ಕೇಂದ್ರಗಳನ್ನು ಉದ್ಘಾಟಿಸಿದರು.
ರಾಯ್ಗಡ್ನಲ್ಲಿ ವಾಹನಗಳಿಗೆ ಇಂಧನ ತುಂಬಿಸುವ ಮೊಬೈಲ್ ರಿಫ್ಯೂಲಿಂಗ್ ಯುನಿಟ್ಸ್ ಮತ್ತು ಝಾನ್ಸಿಯಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ಜಿ) ಪೂರೈಕೆಯನ್ನು ಕೂಡ ಸಚಿವರು ಉದ್ಘಾಟಿಸಿದರು.
ಫ್ಯೂಲ್ ರಿಟೇಲ್ ಭವಿಷ್ಯವು ಮೊಬೈಲ್ ಆಗಿದೆ ಎಂದು ಪ್ರತಿಪಾದಿಸಿದ ಸಚಿವರು, ಈ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಮೊಬೈಲ್ ಇಂಧನ ತುಂಬುವ ಸಿಎನ್ಜಿ ಸೌಲಭ್ಯವನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಕ್ರಮಗಳ ಕುರಿತು ಮಾತನಾಡಿದರು. ಮೊಬೈಲ್ ಇಂಧನ ಚಿಲ್ಲರೆ ವ್ಯಾಪಾರದ ಪ್ರಯೋಜನಗಳನ್ನು ವಿವರಿಸಿದ ಅವರು, ಇದು ಶಾಪಿಂಗ್ ಮಾಲ್ಗಳು, ಕಚೇರಿಗಳು ಮತ್ತು ಇತರ ಸ್ಥಳಗಳಲ್ಲಿ ಗ್ರಾಹಕರನ್ನು ತಲುಪುವ ದೃಷ್ಟಿಯಿಂದ ವೆಚ್ಚ ಅನುಕೂಲ ಮತ್ತು ಪ್ರಯೋಜನವನ್ನು ಒಳಗೊಂಡಿದೆ ಎಂದರು.
ಮೋದಿ ಸರ್ಕಾರದ ಅಡಿಯಲ್ಲಿ, ಹೆಚ್ಚು ಸುಸ್ಥಿರ ಇಂಧನ ಬಳಕೆಗಾಗಿ 2030 ರ ವೇಳೆಗೆ ಪ್ರಾಥಮಿಕ ಇಂಧನ ಮಿಶ್ರಣದಲ್ಲಿ 15 ಪ್ರತಿಶತದಷ್ಟು ನೈಸರ್ಗಿಕ ಅನಿಲವನ್ನು ಸಾಧಿಸಲು ಭಾರತ ಬದ್ಧವಾಗಿದೆ, ಇದು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸಿಒಪಿ -21 ಗೆ ಭಾರತದ ಬದ್ಧತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ನೈಸರ್ಗಿಕ ಅನಿಲದ ಹೆಚ್ಚಿನ ಬಳಕೆಯು ಫ್ಯೂಝಲ್ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದರ ಪರಿಣಾಮವಾಗಿ ಆಮದು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.