ನವದೆಹಲಿ: ಹಿಂದೂಗಳನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದಿದ್ದ ಬಂಧಿತ ಪಾಕಿಸ್ಥಾನದ ಉಗ್ರ ಮೊಹಮ್ಮದ್ ನಾವೇದ್ ಯಾಕುಬ್ ಇದೀಗ ತನ್ನ ವರಸೆ ಬದಲಿಸಿಕೊಂಡಿದ್ದಾನೆ. ತನಗೆ ಉಗ್ರ ತರಬೇತಿ ನೀಡಿ ಲಷ್ಕರ್ ಇ ತೋಯ್ಬಾ ನಾಯಕರನ್ನೇ ಕೊಲೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾನೆ.
ಲಷ್ಕರ್ ಉಗ್ರರು ನಾವೇದ್ನನ್ನು ಬ್ರೇನ್ ವಾಶ್ ಮಾಡಿ, ಮಾನಸಿಕವಾಗಿ ಆತನನ್ನು ಪರಿವರ್ತನೆಗೊಳಿಸಿ ಬಿಎಸ್ಎಫ್ ಯೋಧರ ಮೇಲೆ ದಾಳಿ ನಡೆಸಲು ಜಮ್ಮು ಕಾಶ್ಮೀರಕ್ಕೆ ಕಳುಹಿಸಿದ್ದಾರೆ ಎಂಬ ಅಂಶ ವಿಚಾರಣೆಯ ವೇಳೆ ಬಯಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ದಾಳಿಗೂ ಮುನ್ನ ಉಗ್ರ ನಾಯಕರು ತನಗೆ ತಿನ್ನಲು ಬಿಳಿ ಮಾತ್ರೆಗಳನ್ನು ನೀಡುತ್ತಿದ್ದರು ಎಂದಿರುವ ನಾವೇದ್, ಅದುವೇ ತನ್ನ ಮನಸ್ಥಿತಿಯನ್ನು ಬದಲಿಸಿತು ಎಂಬುದಾಗಿ ಅಂದುಕೊಂಡಿದ್ದಾನೆ. ಹೀಗಾಗಿ ಈಗ ಆತನ ಕೋಪ ಲಷ್ಕರ್ ನಾಯಕರತ್ತ ತಿರುಗಿದೆ.
5 ತರಗತಿಯಲ್ಲಿ ಶಾಲೆ ತೊರೆದಿದ್ದ ನಾವೇದ್, ಜೂಜುಕೋರನಾಗಿದ್ದ. ಒಂದು ದಿನ ಲಷ್ಕರ್ ಉಗ್ರರು ಈತನನ್ನು ಫೈಝಲ್ಬಾದ್ ಮಸೀದಿಯಿಂದ ಕರೆದೊಯ್ದು ಉಗ್ರ ತರಬೇತಿಯನ್ನು ನೀಡಲಾರಂಭಿಸಿದರು.
ಈತನಿಗೆ ನಿರಂತರವಾಗಿ ಮುಸ್ಲಿಮರ ಮೇಲೆ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿಡಿಯೋವನ್ನು ತೋರಿಸಿ ದ್ವೇಷ ಹುಟ್ಟುವಂತೆ ಮಾಡಿದರು. ಮೊದಲಿಗೆ ಮಾನಸಿಕ ತರಬೇತಿ, ಬಳಿಕ ಶಸ್ತ್ರಾಸ್ತ್ರಗಳ ತರಬೇತಿ, ಕೊನೆಗೆ ಸುಸೈಡ್ ಬಾಂಬರ್ ತರಬೇತಿಯನ್ನು ನೀಡಿದರು. ಇದೆಲ್ಲವುಗಳ ಬಳಿಕ ಭಾರತಕ್ಕೆ ನುಸುಳಿಸಿಬಿಟ್ಟು ದಾಳಿ ನಡೆಸಿದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.