ಜೈಪುರ: ಜೈಪುರ ಜಿಲ್ಲಾ ನ್ಯಾಯಾಲಯ ಮಂಗಳವಾರ 12 ಸಿಮಿ ಸದಸ್ಯರನ್ನು ಭಯೋತ್ಪಾದಕರು ಎಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 13 ನೇ ಆರೋಪಿ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿದೆ.
ಇವರೆಲ್ಲರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಭಾರತೀಯ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಆರೋಪವಿದೆ. ಅವರನ್ನು 2014 ರಲ್ಲಿ ಎಟಿಎಸ್ ಬಂಧಿಸಿತ್ತು.
ಅವರಲ್ಲಿ ಆರು ಮಂದಿ ಸಿಕಾರ್ ಮೂಲದವರು, ಮೂವರು ಜೋಧ್ಪುರದವರು, ಒಬ್ಬ ಜೈಪುರ ಮತ್ತು ಒಬ್ಬ ಪಾಲಿ ಮತ್ತು ಒಬ್ಬ ಬಿಹಾರದ ಗಯಾ ಮೂಲದವ. ಖುಲಾಸೆಗೊಂಡವನು ಜೋಧ್ಪುರದ ನಿವಾಸಿ.
ರಾಷ್ಟ್ರ ರಾಜಧಾನಿಯಲ್ಲಿ ಕೆಲವು ಭಯೋತ್ಪಾದಕರನ್ನು ವಿಚಾರಿಸಿ ದೆಹಲಿಯ ಎಟಿಎಸ್ನಿಂದ ರಾಜಸ್ಥಾನ್ ಭಯೋತ್ಪಾದನಾ ವಿರೋಧಿ ಘಟಕವು ಮಾಹಿತಿ ಪಡೆದು ನಂತರ ಇವರನ್ನು ಬಂಧಿಸಿತ್ತು.
ಈ ಏಳು ವರ್ಷದ ಪ್ರಕರಣದಲ್ಲಿ ರಾಜಸ್ಥಾನದ ಸಿಮಿಯ ಸ್ಲೀಪರ್ ಸೆಲ್ ಸೇರಿದೆ.
2014 ರಲ್ಲಿ ಜೈಪುರ, ಸಿಕಾರ್ ಮತ್ತು ಇತರ ಜಿಲ್ಲೆಗಳಿಂದ ಪಡೆದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಎಲ್ಲಾ 13 ಜನರನ್ನು ಬಂಧಿಸಲಾಯಿತು. ಇವರುಗಳು ಸಿಮಿ ಜೊತೆ ಸಂಪರ್ಕ ಹೊಂದಿದ್ದರು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಜೀವ ನೀಡಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ.
ತಪ್ಪಿತಸ್ಥರು ನಕಲಿ ದಾಖಲೆಗಳನ್ನು ತೋರಿಸಿ, ಜಿಹಾದ್ ಹೆಸರಿನಲ್ಲಿ ಹಣ ಸಂಗ್ರಹಿಸಿ, ಭಯೋತ್ಪಾದಕರಿಗೆ ಆಶ್ರಯ ನೀಡಿ ಮತ್ತು ಬಾಂಬ್ ಸ್ಫೋಟಗಳಿಗೆ ಯೋಜನೆ ರೂಪಿಸುತ್ತಿದ್ದರು, ಇದಕ್ಕಾಗಿ ಸಿಮ್ಗಳನ್ನು ಖರೀದಿಸಿದ್ದರು ಎಂದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.