ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಗೂಂಡಾಗಳಿಂದ ಕ್ರೂರವಾಗಿ ಹಲ್ಲೆಗೊಳಗಾಗಿದ್ದ ಬಿಜೆಪಿ ನಾಯಕ ಗೋಪಾಲ್ ಮಜುಂದಾರ್ ಅವರ 85 ವರ್ಷದ ತಾಯಿ ಶೋವಾ ಮಜುಂದಾರ್ ಸೋಮವಾರ ಮುಂಜಾನೆ ನಿಧನರಾದರು ಎಂದು ಮೂಲಗಳು ವರದಿ ಮಾಡಿವೆ.
ಇವರು ಮಾರ್ಚ್ 25 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನಾಲ್ಕು ದಿನಗಳ ನಂತರ ನಿಧನರಾಗಿದ್ದಾರೆ.
ಫೆಬ್ರವರಿ 27 ರ ಬೆಳಿಗ್ಗೆ ಟಿಎಂಸಿ ಕಾರ್ಯಕರ್ತರ ಗುಂಪೊಂದು ಅವರ ಮನೆಗೆ ನುಗ್ಗಿ ಅವರನ್ನು ನೆಲಕ್ಕೆ ತಳ್ಳಿ ಮುಖಕ್ಕೆ ಹೊಡೆದಿತ್ತು. ದಾಳಿಕೋರರು ಬೆದರಿಕೆಯನ್ನು ಹಾಕಿ ಘಟನೆಯ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು ಮತ್ತು ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಗೋಪಾಲ್ ಮತ್ತು ಅವರ ತಾಯಿ ನೀಡಿದ ದೂರುಗಳ ಆಧಾರದ ಮೇಲೆ ಗೂಂಡಾಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಯಸ್ಸಾದ ಮಹಿಳೆಯ ದುರಂತ ಸಾವನ್ನು ತಿಳಿದು ಸಾಮಾಜಿಕ ಮಾಧ್ಯಮಗಳಲ್ಲಿ ಜನರಿಂದ ದುಃಖ ವ್ಯಕ್ತವಾಗಿದೆ. ‘ಈ ಬಂಗಾಳದ ಮಗಳು ಸತ್ತಿದ್ದಾಳೆ’, ಈ ಘಟನೆ ನಾಚಿಕೆಗೇಡಿನ ಸಂಗತಿ ಮತ್ತು ಬಂಗಾಳಕ್ಕೆ ಕಳಂಕವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಸೋಮವಾರ ಟ್ವೀಟ್ ಮಾಡಿದ್ದು, “ಈ ಬಂಗಾಳದ ಮಗಳು ಮೃತಪಟ್ಟಿದ್ದಾಳೆ. ಅವಳ ಮೇಲೆ ಟಿಎಂಸಿ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ಮಾಡಿದ್ದರು. ಆದರೆ ಮಮತಾ ಬ್ಯಾನರ್ಜಿ ಈಕೆಯ ಬಗ್ಗೆ ಸಹಾನುಭೂತಿಯ ಮಾತುಗಳನ್ನು ಆಡಿಲ್ಲ, ಅವಳ ಕುಟುಂಬಕ್ಕಾದ ಗಾಯಗಳನ್ನು ಯಾರು ಗುಣಪಡಿಸುತ್ತಾರೆ?. ಟಿಎಂಸಿಯ ಹಿಂಸಾಚಾರದ ರಾಜಕೀಯವು ಬಂಗಾಳದ ಆತ್ಮವನ್ನು ಗಾಯಗೊಳಿಸಿದೆ” ಎಂದಿದ್ದಾರೆ.
ಶೋವಾ ಅವರ ನಿಧನದ ಬಗ್ಗೆ ಗೃಹ ಸಚಿವ ಅಮಿತ್ ಶಾ ಕೂಡ ದುಃಖ ವ್ಯಕ್ತಪಡಿಸಿದ್ದಾರೆ.
“ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಬಂಗಾಳದ ಮಗಳು ಶೋವಾ ಮಜುಂದಾರ್ ಜಿ ಅವರ ನಿಧನದ ಬಗ್ಗೆ ದುಃಖವಾಗಿದೆ. ಅವರ ಕುಟುಂಬದ ನೋವು ಮತ್ತು ಗಾಯಗಳು ಮಮತಾ ದೀದಿಯನ್ನು ದೀರ್ಘಕಾಲ ಕಾಡುತ್ತವೆ. ಬಂಗಾಳ ಹಿಂಸಾಚಾರ ರಹಿತ ನಾಳೆಗಾಗಿ ಹೋರಾಡಲಿದೆ, ಬಂಗಾಳ ನಮ್ಮ ಸಹೋದರಿಯರು ಮತ್ತು ತಾಯಂದಿರ ಸುರಕ್ಷಿತಕ್ಕಾಗಿ ಹೋರಾಡಲಿದೆ”ಎಂದು ಶಾ ಟ್ವೀಟ್ ಮಾಡಿದ್ದಾರೆ.
This daughter of Bengal, someone’s mother, someone’s sister… is dead. She was brutally assaulted by TMC cadres but Mamata Banerjee didn’t have a word of compassion for her. Who will heal the wounds of her family?
TMC’s politics of violence has bruised Bengal’s soul… pic.twitter.com/sTvhwJ5EFv
— Amit Malviya (@amitmalviya) March 29, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.