ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಬಿರುಸು ಪಡೆದುಕೊಂಡಿದೆ.
ಪುರುಲಿಯಾ ಸಮಾವೇಶದ ಪ್ರಾರಂಭದಲ್ಲಿ ಮೋದಿ ಹಿಂದೂ ಮಹಾಕಾವ್ಯ ರಾಮಾಯಣದ ಉಲ್ಲೇಖವನ್ನು ಈ ಪ್ರದೇಶದ ಸ್ಥಳೀಯರು ಎದುರಿಸುತ್ತಿರುವ ಬಿಕ್ಕಟ್ಟನ್ನು ಎತ್ತಿ ತೋರಿಸಲು ಬಳಸಿದರು.
3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ವರದಿಯಾಗಿರುವ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಮಮತಾ ಬ್ಯಾನರ್ಜಿಯವರ ‘ಖೇಲಾ ಹೋಬ್’ ಘೋಷಣೆ ವಿರುದ್ಧ ಟೀಕೆ ಮಾಡಿದರು.
“ದೀದಿ, ನೀವು ಬಂಗಾಳ ಜನರ ಜೀವನದೊಂದಿಗೆ ಆಡಿದ್ದೀರಿ. ಇಂದಿಗೂ ನೀವು ಖೇಲಾ (ಆಟ) ಬಗ್ಗೆ ಮಾತನಾಡುತ್ತೀರಿ, ದೀದಿ ಖೇಲಾ ಹೋಬ್ (ನಾವು ಆಡುತ್ತೇವೆ) ಎಂದು ಹೇಳುತ್ತಾರೆ, ಆದರೆ ಬಿಜೆಪಿಗೆ ಅಭಿವೃದ್ಧಿ ಮಾಡುವ ಹವ್ಯಾಸ ಇದೆ, ದೀದಿ ಖೇಲಾ ಹೋಬ್ ಹೇಳುತ್ತಾರೆ, ಬಿಜೆಪಿ ವಿಕಾಸ್ ಹೋಬ್ ಎಂದು ಹೇಳುತ್ತದೆ. ದೀದಿ ಖೇಲಾ ಹೋಬ್ ಎಂದು ಹೇಳುತ್ತಾರೆ, ಬಿಜೆಪಿ ಮಹಿಳಾ ಸಬಲೀಕರಣ ಎಂದು ಹೇಳುತ್ತದೆ” ಎಂದಿದ್ದಾರೆ.
“ನಾವು ಡಿಬಿಟಿ-ನೇರ ಲಾಭ ವರ್ಗಾವಣೆಯನ್ನು ನಂಬುತ್ತೇವೆ ಆದರೆ ಟಿಎಂಸಿ ತನ್ನ ಕಮಿಷನ್ ಮೇಲೆ ನಂಬಿಕೆ ಇಟ್ಟಿದೆ” ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.