ನವದೆಹಲಿ: ಮೀನು ಸಂಸ್ಕರಣೆ, ಸಾರ್ವಜನಿಕ ಪ್ರಸಾರ, ಸುಸ್ಥಿರ ನಗರಾಭಿವೃದ್ಧಿ, ರಸ್ತೆ ಮೂಲಸೌಕರ್ಯ ಮತ್ತು ವಸತಿ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಭಾರತ ಮತ್ತು ಮಾಲ್ಡೀವ್ಸ್ ಶನಿವಾರ ಸಹಿ ಹಾಕಿದವು. ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮತ್ತು ಅವರ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು ಮಾತುಕತೆ ನಡೆಸಿದ ನಂತರ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಪ್ರಸಾರ ಕ್ಷೇತ್ರದಲ್ಲಿನ ಒಪ್ಪಂದವು ಪ್ರಸಾರ್ ಭಾರತಿ ಮತ್ತು ಮಾಲ್ಡೀವ್ಸ್ನ ಅಧಿಕೃತ ಮಾಧ್ಯಮವಾದ ಪಿಎಸ್ಎಂ ನಡುವಿನ ಸಹಕಾರಕ್ಕೆ ಸಂಬಂಧಿಸಿದ್ದಾಗಿದೆ. ಸಾರ್ವಜನಿಕ ಪ್ರಸಾರ ಕ್ಷೇತ್ರದಲ್ಲಿ ಸಹಯೋಗ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು ಒಪ್ಪಂದದ ಉದ್ದೇಶವಾಗಿದೆ.
ಡಾ.ಜೈಶಂಕರ್ ಮತ್ತು ಶಾಹಿದ್ ಅವರು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿ ಮತ್ತು ನಡೆಯುತ್ತಿರುವ ದ್ವಿಪಕ್ಷೀಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಕೋವಿಡ್ ನಂತರದ ಆರ್ಥಿಕ ಚೇತರಿಕೆಗಾಗಿ ಮಾಲ್ಡೀವ್ಸ್ಗೆ ಭಾರತ ನಿರಂತರ ಸಹಾಯ ಒಳಗೊಂಡಂತೆ, ಕೋವಿಡ್ ಪರಿಸ್ಥಿತಿಯ ಕುರಿತು ಚರ್ಚೆಗಳನ್ನು ನಡೆಸಿದರು.
ಡಾ.ಜೈಶಂಕರ್ ಅವರು ಒಂದು ಲಕ್ಷ ಹೆಚ್ಚುವರಿ ಕೋವಿಡ್ ಲಸಿಕೆಯನ್ನು ಶಾಹಿದ್ ಮತ್ತು ಮಾಲ್ಡೀವಿಯನ್ ಆರೋಗ್ಯ ಸಚಿವ ಅಹ್ಮದ್ ನಸೀಮ್ ಅವರಿಗೆ ಹಸ್ತಾಂತರಿಸಿದರು.
ಡಾ.ಜೈಶಂಕರ್ ಅವರು ಮಾಲ್ಡೀವ್ಸ್ ಮತ್ತು ಮಾರಿಷಸ್ಗೆ ಪ್ರವಾಸ ಆರಂಭಿಸಿದ್ದು, ಮೊದಲು ಮಾಲ್ಡೀವ್ಸ್ಗೆ ತಲುಪಿದರು.
ಭೇಟಿಯ ವೇಳೆ ವಿದೇಶಾಂಗ ಸಚಿವರು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರನ್ನು ಭೇಟಿ ಮಾಡಿ ವಿದೇಶಾಂಗ ವ್ಯವಹಾರ, ರಕ್ಷಣಾ, ಹಣಕಾಸು, ಆರ್ಥಿಕ ಅಭಿವೃದ್ಧಿ ಮತ್ತು ಯೋಜನೆ ಮತ್ತು ಮೂಲಸೌಕರ್ಯ ಸಚಿವರೊಂದಿಗೆ ಸಾಕಷ್ಟು ಚರ್ಚೆ ನಡೆಸಲಿದ್ದಾರೆ. ಅವರು ಸ್ಪೀಕರ್ ಮೊಹಮ್ಮದ್ ನಶೀದ್ ಮತ್ತು ಇತರ ರಾಜಕೀಯ ಮುಖಂಡರನ್ನು ಭೇಟಿ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.