ಬರೇಲಿ: ಉಗ್ರರು ಖುರಾನಿನ ತತ್ವಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಹೋರಾಡಲು ಮುಂದಾಗಿದೆ ಉತ್ತರಪ್ರದೇಶದ ಮದರಸಾ. ಅದಕ್ಕಾಗಿ ತನ್ನ ಪಠ್ಯದಲ್ಲಿ ‘ಇಸ್ಲಾಂ ಮತ್ತು ಭಯೋತ್ಪಾದನೆ’ ಎಂಬ ಹೊಸ ಅಧ್ಯಯನವನ್ನು ಸೇರಿಸಿದೆ.
ದರಹ ಅಲ ಅಝರತ್ ಎಂಬ ಮದರಸ ಯುವ ವಿದ್ಯಾರ್ಥಿಗಳಿಗೆ ಖುರಾನಿನ ಮೂಲ ತತ್ವಗಳು ಏನೆಂಬುದನ್ನು ಅರ್ಥವಾಗಲಿ ಎಂಬ ಕಾರಣಕ್ಕೆ ತನ್ನ ಹದಿತ್ನಲ್ಲಿ ಹೊಸ ಪಠ್ಯವನ್ನು ಸೇರಿಸಿದೆ.
ತಪ್ಪಾಗಿ ಭಾಷಾಂತರಗೊಂಡ ಖುರಾನಿನ ಪ್ರತಿಗಳನ್ನು ಉಗ್ರರು ಪ್ರಚಾರಪಡಿಸುತ್ತಿದ್ದಾರೆ. ಈ ಮೂಲಕ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅಲ್ಲಿನ ಧರ್ಮಗುರು ಜಾಮೀಯ ರಾಝ್ವಿಯಾ ಇ ಇಸ್ಲಾಂ ತಿಳಿಸಿದ್ದಾರೆ.
ಇಲ್ಲಿ ಖುರಾನಿನ ಮೂಲ ಪ್ರತಿಯಲ್ಲಿರುವ ಅಂಶಗಳನ್ನು ಕಲಿಸಲಾಗುತ್ತದೆ. ಇದರಿಂದ ಧರ್ಮದ ದುರ್ಬಳಕೆ ತಪ್ಪುತ್ತದೆ ಎಂದಿರುವ ಅವರು, ಐಎಸ್, ಅಲ್ಖೈದಾ, ತಾಲಿಬಾನ್ಗಳು ಹದಿಯತ್ನಿಂದ ತಪ್ಪಾಗಿ ಭಾಷಾಂತರಗೊಂಡ ಪ್ರತಿಗಳನ್ನು ಹೊಂದಿವೆ. ಇವರು ಧರ್ಮವನ್ನು ತಪ್ಪಾಗಿ ಬೋಧಿಸಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಖುರಾನಿನ ಒರಿಜಿನಲ್ ಟೆಕ್ಸ್ಟ್ ಅರೆಬ್ಬಿಯಲ್ಲಿ ಮಾತ್ರ ಇದೆ. ಈ ಎಲ್ಲಾ ಅಂಶಗಳನ್ನು ’ಮುಸ್ಲಿಂ ಮತ್ತು ಭಯೋತ್ಪಾದನೆ’ ಪಠ್ಯದಲ್ಲಿ ಅಳವಡಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.