ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಮೈಸೂರು ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿವೆ.
2020 ರ ಎಪ್ರಿಲ್ 1 ರಿಂದ ನವೆಂಬರ್ 12 ರ ವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಇದನ್ನು ಗಣನೆಗೆ ತೆಗೆದುಕೊಂಡಿವೆ. ಒತ್ತಡದ ಸಂದರ್ಭದಲ್ಲಿಯೂ ಸಮರ್ಥವಾಗಿ ವಿವಿಧ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವ ಆಧಾರದಲ್ಲಿ ಈ ರ್ಯಾಂಕ್ ನೀಡಲಾಗಿದೆ. ಪ್ರಥಮ ಮತ್ತು ತುರ್ತು ಹಂತದ ಶಸ್ತ್ರ ಚಿಕಿತ್ಸೆಗಳು ಹೆಚ್ಚು ನಡೆದಿದ್ದು, ಒಟ್ಟು 6557 ಶಸ್ತ್ರ ಚಿಕಿತ್ಸೆ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಗರ್ಭಿಣಿಯರು, ಕೊರೋನಾ ಸೋಂಕಿತರಿಗೆ ಸಹ ಈ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವೆಲ್ಲದರಿಂದ ಈ ಯೋಜನೆಯಡಿ ಒಟ್ಟು 8,06,52,475 ರೂ. ಜಮೆಯಾಗಿರುವುದಾಗಿಯೂ ಇಲಾಖೆಗಳು ಮಾಹಿತಿ ನೀಡಿದೆ.
ಕೊರೋನಾ ಕರ್ತವ್ಯ ನಿರ್ವಹಿಸುವ ಜೊತೆಗೆ ಎಬಿಎಆರ್ಕೆ ನಿರ್ವಹಣೆಯನ್ನು ಸಹ ಉತ್ತಮವಾಗಿ ಮಾಡಿದ್ದಾರೆ. ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತಂಡವನ್ನು ಸಹ ರಚನೆ ಮಾಡಲಾಗಿದೆ. ರೋಗಿಗಳ ಪತ್ತೆ ಕಾರ್ಯದಿಂದ ಹಿಡಿದು ಸರ್ಕಾರದಿಂದ ಹಣ ಜಮೆಯವರೆಗೂ ಈ ತಂಡ ಕಾರ್ಯ ನಿರ್ವಹಿಸುತ್ತದೆ. ಇನ್ನು ಕೊರೋನಾ ವಕ್ಕರಿಸಿಕೊಳ್ಳುವುದಕ್ಕೂ ಮೊದಲು ರಾಜ್ಯದಲ್ಲಿ ಎರಡನೇ ಅಥವಾ ಮೂರನೇ ರ್ಯಾಂಕ್ಗೆ ತೃಪ್ತಿ ಪಟ್ಟುಕೊಳ್ಳುತ್ತಿದ್ದ ಕಿಮ್ಸ್ ಈ ಬಾರಿ ಮೊದಲ ರ್ಯಾಂಕ್ ಪಡೆದಿರುವುದು ಆಸ್ಪತ್ರೆಯ ಆಡಳಿತ ವರ್ಗ, ಸಿಬ್ಬಂದಿಗಳಲ್ಲಿಯೂ ಸಂತಸ ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.