ನವದೆಹಲಿ: ಅಫ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರು ಭಾರತಕ್ಕೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಈ ವರ್ಷ $2 ಬಿಲಿಯನ್ಗೂ ಹೆಚ್ಚಿನ ಮೊತ್ತದ ಸಹಾಯ ಮಾಡಿ ಬದ್ಧತೆ ಪ್ರದರ್ಶತೆಗಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಜಿನೀವಾದಲ್ಲಿ ನಡೆದ ಅಫ್ಘಾನಿಸ್ಥಾನ ಸಮ್ಮೇಳನದಲ್ಲಿ, ಘನಿ ಜರ್ಮನಿ, ಯುಕೆ, ಇಯು, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ ಹಲವಾರು ರಾಷ್ಟ್ರಗಳಿಗೂ ಧನ್ಯವಾದವನ್ನು ಅರ್ಪಣೆ ಮಾಡಿದ್ದಾರೆ.
ನವೆಂಬರ್ 23 ರಂದು ನಡೆದ ಉನ್ನತ ಮಟ್ಟದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಭಾಷಣ ಮಾಡಿದ ಘನಿ ಭಾರತ ಮತ್ತು ಇರಾನ್ಗೆ ಚಹಬಹಾರ್ ಕಾರಿಡಾರ್ಗಾಗಿ ಧನ್ಯವಾದ ಅರ್ಪಿಸಿದ್ದರು.
2017 ರಲ್ಲಿ, ನವದೆಹಲಿಯು ಭಾರತ-ಅಫ್ಘಾನಿಸ್ಥಾನ ವಾಯು ಕಾರಿಡಾರ್ ಅನ್ನು ಪ್ರಾರಂಭಿಸಿತು, ಇದರಿಂದಾಗಿ ಹಣ್ಣುಗಳಂತಹ ಅಫಘಾನ್ ಉತ್ಪನ್ನಗಳು ಬೃಹತ್ ಭಾರತೀಯ ಮಾರುಕಟ್ಟೆ ಪಡೆದವು. ಇರಾನ್ನಲ್ಲಿ ಭಾರತ ನಿರ್ಮಿಸಿದ ಚಬಹಾರ್ ಬಂದರು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಸಹಾಯ ಮಾಡಿದೆ. ವಾಸ್ತವವಾಗಿ, ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ, ಭಾರತವು ದೇಶಕ್ಕೆ 75,000 ಮೆ.ಟನ್ ಗೋಧಿ ನೀಡಿ ಸಹಾಯ ಮಾಡಿತು ಎಂದು ಘನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.