ನಂದೂರ್ಬಾರ್: ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವ ಸಲುವಾಗಿ ಅಂಗನವಾಡಿ ಕಾರ್ಯಕರ್ತರೊಬ್ಬರು ನಿತ್ಯ 18 ಕಿಲೋಮೀಟರ್ ಸ್ವತಃ ದೋಣಿ ಹುಟ್ಟು ಹಾಕಿ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬುಡಕಟ್ಟು ಮಕ್ಕಳು ಮತ್ತು ಗರ್ಭಿಣಿಯರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.
ರೇಲು ವಾಸವಿ ಈ ಕಾರ್ಯ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆ. ನಾಸಿಕ್ ಮೂಲದವರಾಗಿದ್ದಾರೆ. ನರ್ಮದಾ ನದಿ ತಟದಲ್ಲಿ ಬೆಳೆದವರು, ಅಲ್ಲಿ ಆಕೆ ಈಜು ಕೂಡ ಕಲಿತಿದ್ದಾರೆ.
ಏಪ್ರಿಲ್ನಿಂದ, ಅವರು ನವಜಾತ ಬುಡಕಟ್ಟು ಶಿಶುಗಳ, ಬಾಣಂತಿಯರ, ಗರ್ಭಿಣಿಯರ ಯೋಗಕ್ಷೇಮ ವಿಚಾರಿಸಲು ಕುಗ್ರಾಮಗಳಿಗೆ ನದಿ ದಾಟಿ ಭೇಟಿ ನೀಡಲು ಪ್ರಾರಂಭಿಸಿದರು. ಈ ಮೂಲಕ ಅವರಿಗೆ ಸರಿಯಾದ ವೈದ್ಯಕೀಯ ಆರೈಕೆ ಮತ್ತು ಪೋಷಣೆಯನ್ನು ಸಿಗುವುದನ್ನು ಖಚಿತಪಡಿಸಿದರು.
ಅಂಗನವಾಡಿ ಸದಸ್ಯರಾಗಿರುವ ಅವರು ನವಜಾತ ಶಿಶುಗಳು ಮತ್ತು ಹೊಸ ತಾಯಂದಿರ ತೂಕ, ಆರೋಗ್ಯ ಮತ್ತು ಸರಿಯಾದ ಬೆಳವಣಿಗೆಯನ್ನು ಪರಿಶೀಲಿಸುತ್ತಲೇ ಇರುತ್ತಾರೆ.
“ಪ್ರತಿದಿನ ದೋಣಿಯನ್ನು ನಡೆಸುವುದು ಸುಲಭವಲ್ಲ. ನಾನು ಸಂಜೆ ಮನೆಗೆ ಹಿಂದಿರುಗುವ ಹೊತ್ತಿಗೆ ನನ್ನ ಕೈ ನೋಯುತ್ತದೆ. ಆದರೆ ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಶಿಶುಗಳು ಮತ್ತು ಗರ್ಭಿಣಿಯರು ಪೌಷ್ಠಿಕ ಆಹಾರವನ್ನು ತಿನ್ನುವುದು ಮತ್ತು ಆರೋಗ್ಯವಾಗಿರುವುದು ಮುಖ್ಯ. ಕೋವಿಡ್-19 ಸುಧಾರಿಸುವವರೆಗೆ ಈ ಕುಗ್ರಾಮಗಳಿಗೆ ನಾನು ಭೇಟಿ ನೀಡುತ್ತಲೇ ಇರುತ್ತೇನೆ “ಎಂದು ರೇಲು ಹೇಳುತ್ತಾರೆ.
ಈ ಸಾಂಕ್ರಾಮಿಕ ಸಮಯದಲ್ಲಿ ಅವರು ಮಾಡುತ್ತಿರುವ ಪ್ರಯತ್ನಕ್ಕಾಗಿ ಅವರು ಬುಡಕಟ್ಟು ಜನರಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ಅವರ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಮತ್ತು ನಂದರ್ಬಾರ್ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕರ ಗಮನಕ್ಕೂ ಬಂದಿದೆ, ಮಹತ್ತರ ಕಾರ್ಯಕ್ಕಾಗಿ ವೈಯಕ್ತಿಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.