ನವದೆಹಲಿ: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯ ಕಂಚಿನ ವಿಗ್ರಹಗಳನ್ನು ತಮಿಳುನಾಡು ಸರ್ಕಾರದ ಐಡಲ್ ವಿಂಗ್ಗೆ ಹಸ್ತಾಂತರಿಸಿದರು.
ನವದೆಹಲಿಯ ಸಾಂಸ್ಕೃತಿಕ ಸಚಿವಾಲಯದ ಎಎಸ್ಐ ಕೇಂದ್ರ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿಗ್ರಹಗಳನ್ನು ಹಸ್ತಾಂತರ ಮಾಡಲಾಯಿತು. ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಸೆಪ್ಟೆಂಬರ್ 15, 2020 ರಂದು ಈ ಕಂಚಿನ ವಿಗ್ರಹಗಳನ್ನು ಲಂಡನ್ನ ಮೆಟ್ರೋಪಾಲಿಟನ್ ಪೊಲೀಸರು ಲಂಡನ್ನಲ್ಲಿರುವ ಭಾರತದ ಹೈಕಮಿಷನ್ಗೆ ಹಸ್ತಾಂತರಿಸಿದರು. 1958ರಲ್ಲಿ ಮಾಡಿದ ಫೋಟೊ ದಸ್ತಾವೇಜುಗಳ ಪ್ರಕಾರ, ಈ ವಿಗ್ರಹಗಳು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಆನಂದಮಂಗಲದಲ್ಲಿರುವ ಶ್ರೀ ರಾಜಗೋಪಾಲ್ ವಿಷ್ಣು ದೇವಸ್ಥಾನಕ್ಕೆ (ವಿಜಯನಗರ ಅವಧಿಯಲ್ಲಿ ನಿರ್ಮಿಸಲಾದ ದೇವಾಲಯ) ಸೇರಿವೆ.
ತಮಿಳುನಾಡು ಪೊಲೀಸರ ವಿಗ್ರಹ ವಿಭಾಗ ನಡೆಸಿದ ತನಿಖೆಯ ಪ್ರಕಾರ, ಈ ವಿಗ್ರಹಗಳನ್ನು ಶ್ರೀ ರಾಜಗೋಪಾಲ್ ವಿಷ್ಣು ದೇವಸ್ಥಾನದಿಂದ 23/24 ನವೆಂಬರ್ 1978 ರಂದು ಕಳವು ಮಾಡಲಾಗಿದೆ.
ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯ ಕಂಚಿನ ವಿಗ್ರಹಗಳು ಭಾರತೀಯ ಮೆಟಲ್ ಆರ್ಟ್ನ ಮೇರು ಪ್ರತಿಮೆಗಳು ಮತ್ತು ಕ್ರಮವಾಗಿ 90.5 ಸೆಂ, 78 ಸೆಂ, ಮತ್ತು 74.5 ಸೆಂ.ಮೀ ಅಳತೆ ಹೊಂದಿವೆ. ಈ ಶಿಲ್ಪಗಳು ಕ್ರಿ.ಶ 13 ನೇ ಶತಮಾನಕ್ಕೆ ಸೇರಿದವು ಎನ್ನಲಾಗಿದೆ.
ಹಸ್ತಾಂತರಿಸುವ ಸಮಾರಂಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ, 2014 ರಿಂದ ಒಟ್ಟು 40 ಪ್ರಾಚೀನ ವಸ್ತುಗಳನ್ನು ವಿದೇಶಗಳಿಂದ ಭಾರತಕ್ಕೆ ವಾಪಾಸ್ ತರಲಾಗಿದೆ, ಆದರೆ 1976 ರಿಂದ 2014 ರ ಮೊದಲು ಅಂತಹ 13 ಪ್ರಾಚೀನ ವಸ್ತುಗಳನ್ನು ಮಾತ್ರ ವಾಪಾಸ್ ತರಲಾಗಿತ್ತು ಎಂದಿದ್ದಾರೆ.
ಈ ವಿಗ್ರಹಗಳನ್ನು ದೇಶಕ್ಕೆ ತರುವಲ್ಲಿ ಸತತ ಪ್ರಯತ್ನ ಮಾಡಿದ್ದಕ್ಕಾಗಿ ಅವರು ಪುರಾತತ್ವ ಇಲಾಖೆ, ವಿಶೇಷ ಐಡಲ್ ವಿಂಗ್, ತಮಿಳುನಾಡು ಸರ್ಕಾರ, ಡಿಆರ್ಐ ಮತ್ತು ಭಾರತದ ಭಾರತದ ಹೈ ಕಮಿಷನ್ ಅನ್ನು ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.