ನವದೆಹಲಿ: ನಿರೀಕ್ಷೆಗೂ ಮೀರಿದಂತೆ ಭಾರತದ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದೆ ಎಂದು ಆಕ್ಸ್ಫರ್ಡ್ ಎಕನಾಮಿಕ್ಸ್ನ ವರದಿ ಹೇಳಿದೆ.
ಹಾಗೆಯೇ ಪ್ರಸಕ್ತ ಆರ್ಥಿಕ ವರ್ಷದ ನಾಲ್ಕನೇ ಹಂತದಲ್ಲಿ ಹಣದುಬ್ಬರ ಸರಾಸರಿ 65% ಗಿಂತ ಹೆಚ್ಚಾಗುವ ಸಾಧ್ಯತೆ ಸಹ ನಿಚ್ಚಳವಾಗಿದೆ. ಈ ಸಂಬಂಧ ಡಿಸೆಂಬರ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಪಾಲಿಸಿ ದರಗಳನ್ನು ನಿಗದಿ ಮಾಡಲಿದೆ.
ಕೊರೋನಾ ವಕ್ಕರಿಸಿಕೊಳ್ಳುವುದಕ್ಕೂ ಮುಂಚಿತವಾಗಿ ಗ್ರಾಹಕರ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇಂಧನ ದರದಲ್ಲಿ ಏರಿಳಿತ ಹೊರತುಪಡಿಸಿದಂತೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ದರ ಏರಿಕೆ ಇತ್ತು. ಪ್ರಸ್ತುತ ಈ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕ ನಡೆಯುತ್ತಿದ್ದು, ಹಣದುಬ್ಬರ ಮತ್ತಷ್ಟು ಬಾಧಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು 2021 ರಲ್ಲಿ ನಾವು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಆಕ್ಸ್ಫರ್ಡ್ ಎಕನಾಮಿಕ್ಸ್ನ ವರದಿ ಹೇಳಿದೆ.
ಅಕ್ಟೋಬರ್ ತಿಂಗಳಿನಲ್ಲಿ ದುಬಾರಿ ತರಕಾರಿಗಳು ಮತ್ತು ಮೊಟ್ಟೆಗಳು ಚಿಲ್ಲರೆ ಹಣದುಬ್ಬರವನ್ನು ಆರು ಮತ್ತು ಒಂದೂವರೆ ವರ್ಷದ ಗರಿಷ್ಠ 7.61 ಕ್ಕೆ ಏರಿಸಿದ್ದು, ಇದು ಆರ್ಬಿಐನ ಆರಾಮ ವಲಯಕ್ಕಿಂತ ಗಮನಾರ್ಹವಾಗಿದೆ. ಚಿಲ್ಲರೆ ಹಣದುಬ್ಬರ ಈ ವರ್ಷದ ಸೆಪ್ಟೆಂಬರ್ ಸಂದರ್ಭದಲ್ಲಿ 7.27% ರಷ್ಟಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ 7.61% ಗಳಷ್ಟಿತ್ತು. ಒಟ್ಟಿನಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿದಂತೆ ಚೇತರಿಕೆ ಕಾಣುತ್ತಿದೆ, ಇದು ವಿಶ್ವಕ್ಕೆ ಸಹ ಸಹಕಾರಿಯಾಗಲಿದೆ ಎಂದು ಆಕ್ಸ್ಫರ್ಡ್ ಎಕನಾಮಿಕ್ಸ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.