ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಕೆವಾಡಿಯದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಪೆರೇಡ್ನಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಏಕ ಭಾರತ ಶ್ರೇಷ್ಠ ಭಾರತ ಸಂಕಲ್ಪವನ್ನು ಸಾಕಾರಗೊಳಿಸಲು ಕಳೆದ ಆರು ವರ್ಷಗಳಿಂದ ದೇಶ ಶ್ರಮಿಸುತ್ತಿದೆ ಎಂದರು.
2014ರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿವಸ್ ಆಗಿ ಆಚರಣೆ ಮಾಡಲಾಗುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಏಕ ಭಾರತ ಶ್ರೇಷ್ಠ ಭಾರತ ಸಂಕಲ್ಪವನ್ನು ಈಡೇರಿಸಲು ದೇಶ ಶ್ರಮಿಸುತ್ತಿದೆ ಎಂದಿದ್ದಾರೆ.
ದೇಶದ ಹಿತವೇ ಸರ್ವೋಚ್ಚ ಹಿತವಾಗಿರಬೇಕು. ಬೇರೆಯವರ ಹಿತದ ಬಗ್ಗೆ ಯೋಚಿಸಿದಾಗ ನಮ್ಮ ಪ್ರಗತಿ ಕೂಡ ಆಗುತ್ತದೆ ಎಂದಿದ್ದಾರೆ.
ಪುಲ್ವಾಮ ದಾಳಿಯ ಬಗ್ಗೆ ಪ್ರತಿಪಕ್ಷಗಳು ಆಡಿದ ಮಾತುಗಳನ್ನು ಸ್ಮರಿಸಿದ ಮೋದಿ, ಇಂತಹ ಸ್ವಾರ್ಥದ ರಾಜಕೀಯವನ್ನು ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ದೇಶದ ಹಿತವೂ ಆಗುವುದಿಲ್ಲ ಮತ್ತು ರಾಜಕೀಯ ಪಕ್ಷಗಳ ಹಿತವೂ ಆಗುವುದಿಲ್ಲ. ಪಾಕಿಸ್ಥಾನ ಈಗ ಪುಲ್ವಾಮ ದಾಳಿಯ ಹಿಂದೆ ತನ್ನ ಕೈವಾಡ ಇರುವುದನ್ನು ಒಪ್ಪಿಕೊಂಡಿದೆ. ಈಗ ಪ್ರತಿಪಕ್ಷಗಳು ಮೌನಕ್ಕೆ ಶರಣಾಗಿವೆ ಎಂದಿದ್ದಾರೆ.
“ದೇಶದ ಸುರಕ್ಷತೆಯ ಹಿತಕ್ಕಾಗಿ, ನಮ್ಮ ಸೇನಾಪಡೆಗಳ ಮನೋಬಲಕ್ಕಾಗಿ ಇಂತಹ ರಾಜಕೀಯವನ್ನು ದಯವಿಟ್ಟು ಮಾಡಬೇಡಿ, ಇಂತಹ ಸ್ವಾರ್ಥಗಳಿಂದ ದೂರವಿರಿ. ನಿಮ್ಮ ಸ್ವಾರ್ಥಕ್ಕಾಗಿ ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ದೇಶವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದೀರಿ. ಇದರಿಂದ ನೀವು ದೇಶದ ಹಿತವನ್ನೂ ಕಾಪಾಡಲಾರಿರಿ, ನಿಮ್ಮ ಪಕ್ಷದ ಹಿತವನ್ನೂ ಕಾಪಾಡಲಾರಿರಿ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.