ನವದೆಹಲಿ: ನವರಾತ್ರಿ ಹಬ್ಬದ ಕೊನೆಯ ದಿನವಾದ ನವಮಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಿದ್ಧಿಧಾತ್ರಿ ದೇವಿಯನ್ನು ಈ ದಿನ ಪೂಜಿಸಲಾಗುತ್ತದೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ, ” ಮಹಾನವಮಿಯಂದು ರಾಷ್ಟ್ರಕ್ಕೆ ಹೃತ್ಪೂರ್ವಕ ಶುಭಾಶಯಗಳು. ನವರಾತ್ರಿಯ ಈ ಶುಭ ದಿನದಂದು ಮಾತೆ ದುರ್ಗಾ ದೇವತೆ ಸಿದ್ಧಿದಾತ್ರಿಯ ಒಂಬತ್ತನೇ ರೂಪವನ್ನು ಪೂಜಿಸಲಾಗುತ್ತದೆ. ಮಾ ಸಿದ್ಧಿದಾತ್ರಿಯ ಆಶೀರ್ವಾದದೊಂದಿಗೆ ಪ್ರತಿಯೊಬ್ಬರೂ ತಮ್ಮ ಕಾರ್ಯಗಳಲ್ಲಿ ಯಶಸ್ವಿಯಾಗಲಿ” ಎಂದಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅವರು ಕೂಡ ದೇಶದ ಜನತೆಗೆ ವಿಜಯದಶಮಿಯ ಶುಭಾಶಯ ಕೋರಿದ್ದಾರೆ. “ವಿಜಯದಶಮಿಯ ಮಹಾಪರ್ವವು ಮನುಷ್ಯನನ್ನು ಅನ್ಯಾಯ, ದುರಹಂಕಾರ ಮತ್ತು ಅಸತ್ಯಗಳನ್ನು ತ್ಯಜಿಸಲು, ಧರ್ಮ, ಆತ್ಮಸಾಕ್ಷಿಯ ಮತ್ತು ಸತ್ಯದ ಹಾದಿಯನ್ನು ಅನುಸರಿಸಲು ಪ್ರೇರೇಪಿಸುವ ಮತ್ತು ಕಲಿಸುವ ಹಬ್ಬವಾಗಿದೆ. ರಾಮನು ಕೆಟ್ಟದ್ದನ್ನು ಜಯಿಸುವ ಶಕ್ತಿಯನ್ನು ನಮಗೆ ನೀಡಲಿ.’ವಿಜಯದಶಾಮಿ’ ಗೆ ಶುಭಾಶಯಗಳು. ಜೈ ಶ್ರೀ ರಾಮ್!” ಎಂದಿದ್ದಾರೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮಹಾ ನವಮಿ ಸಂದರ್ಭದಲ್ಲಿ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ”ಎಲ್ಲಾ ಭಕ್ತರು ಅಷ್ಟ ಸಿದ್ಧಿಯ ಆಶೀರ್ವಾದ ಪಡೆಯಲಿ, ತಾಯಿಯ ಆಶೀರ್ವಾದದಿಂದ ವಾತ್ಸಲ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮರಸ್ಯದ ಮನೋಭಾವವು ಜಗತ್ತಿನಲ್ಲಿ ಹರಡಲಿ. ತಾಯಿಯ ಅನುಗ್ರಹ ಶಾಶ್ವತವಾಗಿರಲಿ. ಇದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಜೈ ಮಾತಾ ಸಿದ್ಧಿಧಾತ್ರಿ! ” ಎಂದಿದ್ದಾರೆ.
देशवासियों को महानवमी की हार्दिक शुभकामनाएं। नवरात्रि के इस पावन दिवस पर मां दुर्गा की नौवीं शक्ति देवी सिद्धिदात्री की पूजा-अर्चना की जाती है। मां सिद्धिदात्री के आशीर्वाद से हर किसी को अपने कार्यों में सिद्धि प्राप्त हो। pic.twitter.com/fKYiHARytG
— Narendra Modi (@narendramodi) October 25, 2020
विजयादशमी का महापर्व मनुष्य को अधर्म, अहंकार और असत्य का परित्याग कर धर्म, विवेक और सत्य के मार्ग पर चलने की प्रेरणा व शिक्षा देने वाला पर्व है।
प्रभु श्री राम हमें बुराइयों पर विजय प्राप्त करने की शक्ति दें।
'विजयादशमी' की हार्दिक शुभकामनाएँ
जय श्री राम! pic.twitter.com/DNkbPDocWg
— Amit Shah (@AmitShah) October 25, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.