ನವದೆಹಲಿ: ಪಿಎಂ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದಡಿ 4 ವಾರಗಳಲ್ಲಿ ರೈಲ್ವೆ ಸಚಿವಾಲಯವು ವಲಸೆ ಕಾರ್ಮಿಕರಿಗಾಗಿ 1.6 ಲಕ್ಷ ಮಾನವ-ದಿನಗಳ ಕೆಲಸವನ್ನು ಉತ್ಪಾದಿಸಿದೆ ಎಂದು ವರದಿಗಳು ತಿಳಿಸಿವೆ.
ರೈಲ್ವೆ ಸಚಿವಾಲಯದ ಪ್ರಕಾರ, ಇದುವರೆಗೆ ವಲಸೆ ಕಾರ್ಮಿಕರಿಗೆ ಒಟ್ಟು 608 ಕೋಟಿ ರೂಪಾಯಿಗಳನ್ನು ವೇತನವಾಗಿ ಪಾವತಿ ಮಾಡಲಾಗಿದೆ.
ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ರಂದು ಆರಂಭಿಸಿದರು ಮತ್ತು ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ಜಾರ್ಖಂಡ್ ಆರು ರಾಜ್ಯಗಳ 116 ಗುರುತಿಸಲಾದ ಜಿಲ್ಲೆಗಳಲ್ಲಿ ಅಭಿಯಾನ ಜಾರಿಯಲ್ಲಿದೆ.
ಗ್ರಾಮೀಣ ಭಾರತದಲ್ಲಿ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ನರೇಂದ್ರ ಮೋದಿ ಮೆಗಾ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನವನ್ನು ಪ್ರಾರಂಭಿಸಿದರು.
ತಮ್ಮ ತವರು ರಾಜ್ಯಗಳಿಗೆ ಹಿಂದಿರುಗುವ ವಲಸೆ ಕಾರ್ಮಿಕರ ಸಂಖ್ಯೆಯ ಆಧಾರದ ಮೇಲೆ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ.
ಕರೋನವೈರಸ್ ಕಾರಣದಿಂದ ಗ್ರಾಮಗಳಿಗೆ ಮರಳಿದ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ವಿನ್ಯಾಸಗೊಳಿಸಲಾದ 160 ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ರೈಲ್ವೆ ಗುರುತಿಸಿದೆ. ಅಲ್ಲಿ ವಲಸಿಗೆ ಕಾರ್ಮಿಕರಿಗೆ ಉದ್ಯೋಗವನ್ನು ನೀಡಲಾಗುತ್ತಿದೆ.
ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರ ಪ್ರಕಾರ, “8,828 ಮಾನವಶಕ್ತಿ ಅಕ್ಟೋಬರ್ ಅಂತ್ಯದ ವೇಳೆಗೆ 8,67,675 ಮಾನವ ದಿನಗಳ ಕೆಲಸವನ್ನು ಉತ್ಪಾದಿಸುತ್ತದೆ ಮತ್ತು ಅಂದಾಜು 1,800 ಕೋಟಿ ರೂ. ಇದಕ್ಕೆ ವ್ಯಯವಾಗಲಿದೆ.
ಬಿಹಾರದಲ್ಲಿ ರೈಲ್ವೆ 204.81 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ 62,667 ಮಾನವ ದಿನಗಳ ಕೆಲಸವನ್ನು ಉತ್ಪಾದಿಸಿದೆ.
ಉತ್ತರ ಪ್ರದೇಶದಲ್ಲಿ ರೈಲ್ವೆ 52,696 ಮಾನವ ದಿನಗಳ ಕೆಲಸಕ್ಕೆ ಸಾಕ್ಷಿಯಾಗಿದ್ದು, 246.30 ಕೋಟಿ ರೂ.ವ್ಯಯಿಸಿದೆ
ರಾಜಸ್ಥಾನದಲ್ಲಿ ರೈಲ್ವೆ 10,458 ಮಾನವ ದಿನಗಳ ಕೆಲಸ ಸೃಷ್ಟಿಸಿದ್ದು ಮತ್ತು 43.49 ಕೋಟಿ ರೂ. ವ್ಯಯಿಸಲಾಗಿದೆ.
ಮಧ್ಯಪ್ರದೇಶದಲ್ಲಿ ರೈಲ್ವೆ ಯಿಂದ 32,379 ಮಾನವ ದಿನಗಳ ಕೆಲಸಗಳನ್ನು ರಚಿಸಲಾಗಿದೆ ಮತ್ತು 70.87 ಕೋಟಿ ರೂ. ವ್ಯಯಿಸಲಾಗಿದೆ.
ಒಡಿಶಾದಲ್ಲಿ 40.38 ಕೋಟಿ ರೂ. ಖರ್ಚು ಮಾಡಿ, 1,147 ಮಾನವ ದಿನಗಳ ಕೆಲಸವನ್ನು ರೈಲ್ವೆ ಗಳಿಸಿದೆ.
ಜಾರ್ಖಂಡ್ನಲ್ಲಿ ರೈಲ್ವೆ 3.03 ಕೋಟಿ ರೂ.ಗಳ ವೆಚ್ಚದಲ್ಲಿ 1,904 ಮಾನವ ದಿನಗಳ ಕೆಲಸವನ್ನು ಉತ್ಪಾದಿಸಿದೆ.
ಲೆವೆಲ್ ಕ್ರಾಸಿಂಗ್ಗಳಿಗಾಗಿ ಅಪ್ರೋಚ್ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ಸಿಲ್ಟೆಡ್ ಜಲಮಾರ್ಗಗಳು, ಕಂದಕಗಳು ಮತ್ತು ಚರಂಡಿಗಳ ಅಭಿವೃದ್ಧಿ ಮತ್ತು ಸ್ವಚ್ಛಗೊಳಿಸುವಿಕೆ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.