ತಿರುವನಂತಪುರಂ: ಕೇರಳದ ಸುಪ್ರಸಿದ್ಧ ದೇಗುಲ ಅನಂತ ಪದ್ಮನಾಭದ ಆಡಳಿತವನ್ನು ರಾಜಮನೆತನಕ್ಕೆ ನೀಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ತಿರುವನಂತಪುರಂ ರಾಜಮನೆತನ ಸ್ವಾಗತಿಸಿದೆ.
ವರದಿಗಳ ಪ್ರಕಾರ, “ಶ್ರೀ ಪದ್ಮನಾಭ ಸ್ವಾಮಿ ದೇಗುಲದ ವ್ಯವಹಾರಗಳ ಮೇಲಿನ ರಾಜಮನೆತನದ ಹಕ್ಕನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್ ತೀರ್ಪು ನಮಗೆ ಸಂತೋಷವನ್ನು ತಂದಿದೆ” ಎಂದು ರಾಜಮನೆತನ ಹೇಳಿದೆ.
“ಸುಪ್ರೀಂಕೋರ್ಟ್ ತೀರ್ಪು ಸಂತೋಷ ತಂದಿದೆ. ಕಾನೂನು ಹೋರಾಟದಲ್ಲಿ ರಾಜಮನೆತನದ ಬೆಂಬಲಕ್ಕೆ ನಿಂತ ಎಲ್ಲಾ ಜನರಿಗೂ ನಾವು ಕೃತಜ್ಞರಾಗಿದ್ದೇವೆ” ಎಂದು ರಾಜಮನೆತನದ ಸದಸ್ಯ ಅಶ್ವತಿ ತಿರುನಾಲ್ ಗೌರಿ ಲಕ್ಷ್ಮೀ ಬಾಯಿ ಹೇಳಿದ್ದಾರೆ.
ತೀರ್ಪಿನ ಮಾಹಿತಿ ನಮಗೆ ಇನ್ನಷ್ಟೇ ಲಭ್ಯವಾಗಬೇಕು, ಕಾನೂನು ತಜ್ಞರೊಂದಿಗೆ ನಿರಂತರ ಮಾತುಕತೆಯಲ್ಲಿ ಇದ್ದೇವೆ ಎಂದು ಅವರು ಹೇಳಿದ್ದಾರೆ.
ಅನಂತ ಪದ್ಮನಾಭ ದೇಗುಲ ಸಾರ್ವಜನಿಕ ದೇಗುಲವಾಗಿ ಮುಂದುವರೆಯಲಿದೆ, ಆದರೆ ಅದರ ವ್ಯವಹಾರಗಳ ಮೇಲೆ ರಾಜಮನೆತನಕ್ಕೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.